ತುಮಕೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ

ತುಮಕೂರು ಜಿಲ್ಲೆಯ ಎಲ್ಲ ಕನ್ನಡಿಗರು ಈ ವೇದಿಕೆಯನ್ನು ಉಪಯೋಗಿಸಬಹುದು.

Latest Activity

on Wednesday
November 15
nagaraju. C and kanaka lakshmi joined ತುಮಕೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
November 14
EKAVI ಈಕವಿ PAVAGADA, Tumkur
November 13
Govardhana K N is now a member of ತುಮಕೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
November 9
November 9
EKAVI ಈಕವಿ TURUVEKERE, Tumkur
November 6
Devaraj Gowda.M.N and Arunkumar, N. P. joined ತುಮಕೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
November 6
November 5
November 5
November 5
November 2
ashwin is now a member of ತುಮಕೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
November 1

RSS

ಗೌತಮಿ(ಅಭಿಸಾರಿಕೆಯ ಕತೆಗಳು-೪)

ಮಧ್ಯರಾತ್ರಿ ಮನೆಗೆ ಮರಳಿದ ಮೇಲೆ ಅಭಿಸಾರಿಕೆ ಎಲ್ಲೆಂದು ಹುಡುಕುತ್ತೇನೆ. ಎಲ್ಲೂ ಕಾಣಿಸುವುದಿಲ್ಲ. ಎಲ್ಲಿ ಹೋದಳಿವಳು ಎಂದು ಅಂಕಣದ ಮಧ್ಯ ಇಣುಕಿದರೆ ಅದೋ ಅಲ್ಲಿ ಚಂದ್ರನ ಕೆಳಗೆ ಕೌಪಿನ ತೊಟ್ಟು ಪದ್ಮಾಸನದಲ್ಲಿ ಕುಳಿತಿದ್ದಾಳೆ. ಎದುರಿಗೆ ಹೊಚ್ಚ ಹೊಸ ಕುಂಡದಲ್ಲಿ ನೆಟ್ಟ ಆಲದ ಮರದ ಸಸಿ ! ನನಗೆ ನಗು ತಡೆಯಲಾಗಲಿಲ್ಲ. ಇದೇ ಸಂಜೆ ನಾವಿಬ್ಬರೂ ದೀಪಾಲಂಕೃತ ಊರನ್ನು ನೋಡಲೆಂದು ಆಕಾಶಯಾನ ಕೈಗೊಂಡಿದ್ದೆವು. ಮೇಲಿನಿಂದ ಇಡೀ ಊರಿಗೆ ಊರೇ ಹೊಳೆಯುತಿತ್ತು. ಹಣತೆಯ ದೀಪಗಳು ನಕ್ಷತ್ರದಂತೆ ಮಿಣುಗುತ್ತಿದ್ದವು. ಹೀಗೆ ಸೊಗಸಾದ ಮನೆ-ಮಠಗಳನ್ನು [...]

ರಾಗಿಣಿ (ಅಭಿಸಾರಿಕೆಯ ಕತೆಗಳು-೩)

ಹತ್ತಿರದೆಲ್ಲೊ ಬಿದ್ದ ಮಿಂಚಿನ ಸದ್ದಿನೊಂದಿಗೆ ನನ್ನ ನಿದ್ದೆ ಹಾರಿಹೋಯಿತು. ಕಣ್ತೆರೆದಾಗ  ಎದುರಿಗೆ ಕಂಡ ಕಪ್ಪು ಆಕೃತಿ ಇನ್ನಷ್ಟು ಬೆಚ್ಚಿ ಬೀಳಿಸಿತು. ಹಣತೆಯ ಬೆಳಕು ಸ್ವಲ್ಪ ಪ್ರಖರವಾದಾಗ, ಅರೆ! ಇದೆನಿದು? ಅಭಿಸಾರಿಕೆ. ಅದೂ ಹೊತ್ತಲ್ಲದ ಹೊತ್ತಲ್ಲಿ. ಮಂಚದ ಆ ತುದಿಯಲ್ಲಿ ಕಂಭಕ್ಕೊರಗಿ ಮುದುರಿ ಕುಳಿತಿದ್ದಾಳೆ.  ನಿಧಾನವಾಗಿ ಹೆಗಲ ಮೇಲೆ ಕೈಯನ್ನಿಟ್ಟೆ. ತಿರುಗಿ ನೋಡಿದವಳೇ  ನನ್ನ ಎದೆಯಲ್ಲಿ ಮುಖವಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಕಣ್ಣಿನಿಂದ ಒಂದೇ ಸಮನೆ ಅಶ್ರುಧಾರೆ. ಹೊರಗಿನ ಮಳೆಯೊಡನೆ ಸ್ಪರ್ಧಿಸುವಂತಿದೆ. ಓಹ್! ನಿಧಾನವಾಗಿ ಅಕೆಯನ್ನು ಬಳಸಿಕೊಂಡು ದಿಂಬಿಗೆ [...]

“ಗಣಪತಿ ಬಪ್ಪಾ ಮೊರಯಾ” ಅಂದರೇನು?

“ಗಣಪತಿ ಬಪ್ಪಾ ಮೊರಯಾ” ಇದರ ಅರ್ಥ ನಿಮಗೆ ಖಚಿತವಾಗಿ ಗೊತ್ತಿದ್ದರೆ ಹೇಳಿ ಪ್ಲೀಸ್ ನನಗೆ ಸಿಕ್ಕ ಕೆಲ ಅರ್ಥಗಳು; -ಗಣಪತಿ ನನ್ನ ದೇವರು -ತಂದೆ ಗಣಪತಿ -ಗಣಪತಿಗೆ ಜಯವಾಗಲಿ -ಗಣಪತಿ ನಿನಗೆ ಸ್ವಾಗತ -ಮೊರಯಾ ಗೊಸಾವಿ ೧೪ನೇ ಶತಮಾನದ ಪ್ರಸಿದ್ಧ ಗಣಪತಿಯ ಭಕ್ತ. ಈತನ ನೆನಪಿಗಾಗಿ ಗಣಪತಿಯ ಜೊತೆಯಲ್ಲಿ ಮೊರಯಾ ಸೇರಿಸಲಾಗಿದೆ. ಈತ ಕರ್ನಾಟಕದ ಸಾಲಿಗ್ರಾಮದವನಂತೆ. Posted in ಪ್ರಶ್ನೆಗಳು

ನಾನು ಮತ್ತು ಔರಂಗಜೇಬ

ಮನೆಯಲ್ಲಿ ಎಲ್ಲರೂ ನನ್ನ ಔರಂಗಜೇಬ* ಎಂದು ತೀರ್ಮಾನಿಸಿ ಆಗಿದೆ. ಅದೂ ಈಗೀಗ ಅಲ್ಲ, ತುಂಬಾ ಮೊದಲಿನಿಂದ. ನನ್ನ ಅಮ್ಮ ಸೀತಾರವಾದಕಿ ಹಾಗೂ ಅಪ್ಪ ಮೃದಂಗ ಮತ್ತು ಮೋರ್ಚಿಂಗ್ ಕಲಿತವರು. ಆದರಿಂದ ಸಹಜವಾಗಿ ನನ್ನನ್ನೂ ಸಂಗೀತ ಕಲಿಯಲು ಚಿಕ್ಕ ವಯಸ್ಸಿನಿಂದಲೇ ತಯಾರು ಮಾಡಲಾಯಿತು. ಅಮ್ಮನ ಗುರುಗಳ ಬಳಿಯಿಂದಲೇ ಪಾಠ ಪ್ರಾರಂಭವಾಯಿತು. ಆದರೆ ’ಸ’ ಇಂದ ಆರಂಭವಾಗಿದ್ದು ಸಪ್ತಮ ’ಸ’ ಗೆ ಏರಲೇ ಇಲ್ಲ. ನನಗೆ ಕಿಂಚಿತ್ತೂ ಸ್ವರಜ್ಞಾನವಿಲ್ಲವೆಂದು ಅವರು ಮುಂದಿನ ಪಾಠ ನಿರಾಕರಿಸಿದರು. ಆದರೆ ಆಶಾವಾದಿಯಾದ ನನ್ನ ಅಮ್ಮ ಬಿಡಬೇಕಲ್ಲ. [...]

ಕೋನ

“ಆಕೆ ಸರಿಯಿಲ್ಲ” ಮದುವೆಗೆ ಮುನ್ನ ಕಾಮಿಸಿದ್ದರೆ ಮದುವೆಯ ನಂತರ ಕಾಮಿಸದಿದ್ದರೆ ಮದುವೆಗೆ ಮುನ್ನದ ಬಸಿರು ಮದುವೆಯ ನಂತರ ಆಗದ ಬಸಿರು ’ಮದುವೆ’,  ಹ್ಹ…. ಹ್ಹಾ…….. ಏಷ್ಟು ಬೇಗ ಬದಲಿಸುತ್ತದೆ ಎಲ್ಲವನ್ನ !!! Posted in ಇರುವೆ

Members

  • ravikumar tl
  • Poonam SB
  • sowbhagya
  • govindaraju.k
  • Raghu Rayanna
  • shivaprasad
  • ravikumar ks
  • Shashidhar S
  • Lokesh Reddy
  • kavita Rani
  • kumaraswamy
  • raghu nandan
  • vyshak
  • Dore M
  • hema.pn
  • Gururaj

RSS

ಅಮೃತಧಾರೆ....

ದೇವತೆಗಳು, ದಾನವರು
                                    ಅಮರತ್ವಕ್ಕಾಗಿ ಕಡೆದರು ಕಡಲನ್ನು,

ಹಾಲಹಲದ ನಂತರ

ದೇವತೆಗಳಿಗೆ ದೊರೆಯಿತು ಅಮೃತವು...

ಬೇಡ ಎನಗೆ ಅಮೃತವೂ  ಅಮರತ್ವವೂ

                                     ಸಾಕೆನಗೆ ಬರೀ ಸ್ನೇಹ  ಪ್ರೀತಿ  ಈ ಜನ್ಮದಲ್ಲಿ.
ಹಾಗಾಗಿ ಸ್ನೇಹದ ಕಡಲ ಕಡೆಯುತ

ಕಾಯುತ್ತಿರುವೆ ತೇಲಿ ಬರುವ  ಆ  " ಅಮೃತ"  ಧಾರೆಗಾಗಿ.........

ನಾವೂ ಅನಾಥರು... ಒಮ್ಮೊಮ್ಮೆ................................................................

ದೀಪಾವಳಿ ಮೊನ್ನೆ ಮೊನ್ನೆ ಮುಗಯಿತಲ್ಲ... ಅದರ ೨ ದಿನಗಳ ಮೊದಲು ಸುಮಾರು ೧೨-೧ ಘಂಟೆ ಮಧ್ಯಾಹ್ನದ ಹೊತ್ತು ನನ್ನ ಅಂಗಡಿಯಲ್ಲಿ ಕುಳಿತ್ತಿದ್ದೆ.  ಒಬ್ಬ ಸುಮಾರು ೨೫-೩೦ರ ವಯಸ್ಸಿನ ಯುವಕ ಬಂದು ನನ್ನೆದುರು ನಿಂತ. ನಾನು ಸ್ವಾಭಾವಿಕವಾಗಿ ಏನು ? ಎಂದೆ.
ನಾನು ಶಿವಮೊಗ್ಗದಿಂದ ಕಾರವಾರ ಹೋಗುವಾಗ , ನಿನ್ನೆ ರಾತ್ರಿ ಸಾಗರದಲ್ಲಿ ಎಲ್ಲವನ್ನು ಕಳೆದುಕೊಂಡಿದ್ದೇನೆ ಈಗ ಕನಿಷ್ಡ ಹೊನ್ನಾವರ ಹೋಗಲು ಬಸ್ ಖರ್ಚಿಗೆ ಹಣ ಬೇಕು ಎಂದು  ಹೇಳಿದ.
ನಾನು ಸ್ವಲ್ಲ ಕರುಣಾಳು ಆದರು ಕೂಡ ಆರೋಗ್ಯವಂತರಿಗೆ ಎನೂ ಕೊಡುವ ರಿವಾಜು ಇಟ್ಟುಕೊಂಡಿಲ್ಲ. ಆದರೂ ಹಬ್ಬದ ಎದುರು ನೋಡಿ...! ಸ್ವಲ್ಲ ದಯೆ ಬಂತು..!
ಹೊನ್ನಾವರ ಬಸ್ ಇದೆಯಾ ನೋಡು , ಇದ್ದರೆ ಬರ್ಸ ಚಾರ್ಜ್ ನಾನು ಕೊಡುತ್ತೇನೆಂದು ಹೇಳಿ, ಅಲ್ಲೆ ಬಂದ ನನ್ನ ಗೆಳೆಯನ ವಾಹನದಲ್ಲಿ ಕಳುಹಿಸಿದೆ.
ಹಿಂದಿನ ನನ್ನ ಅನುಭವಗಳ ಪ್ರಕಾರ ಬಸ್ ಟಿಕೇಟ್ ತೆಗೆಸುತ್ತೇನೆ ಎಂದರೆ ಆಸಾಮಿಗಳು ಪರಾರಿಯಾಗುತ್ತಿದ್ದರು, ಆದರೆ ಈ ಸಾರಿ
ಹತ್ತೇ ನಿಮಿಷಗಳಲ್ಲಿ ಆತ ಮರಳಿ ಬಂದು ೨-೩೦ಕ್ಕೆ ಬಸ್ ಇರುವುದಾಗಿ ಹೇಳಿದ. ನಾನು ಕೂಡ ನನ್ನ ಮಾತಿನಂತೆ ಬಸ್ ನಿಲ್ದಾಣಕ್ಕೆ ಆತನನ್ನು ಕರೆದೊಯ್ದು, ಟಿಕೇಟ್ ತೆಗಿಸಿ, ಆತನಿಗೆ ೧೦ ರೂ ಖರ್ಚಿಗೆ ಇಟ್ಟು ಬಂದೆ.
ಇದೆಲ್ಲ ಯಾಕೆ ಹೇಳತ್ತಾ ಇದ್ದೇನೆಂದ್ರೆ, ನಾವುಗಳು ಪರ ಊರಲ್ಲಿ  ಎಲ್ಲ ಕಳೆದುಕಂಡರೆ ನಮ್ಮ ಗತಿ ಏನಾಗಬಹುದು?
ದೇವರೇ ಗತಿ. ಅವನಲ್ಲಿ ೧ ರೂ ಕೂಡ ಇರಲಿಲ್ಲ ಹಾಗೂ ಸೆಲ್ ಫೋನ್ ಕೂಡ ಕಳೆದುಕೊಂಡಿದ್ದ.....

ಸೋದರಿಗೊಂದು ಆತ್ಮ ನಿವೇದನಾ ಪತ್ರ..............

ಪ್ರಿಯ ಸೋದರಿ,

ನಮ್ಮ ಪರಿಚಯ ಪಕ್ವವಾಗುತ್ತಿರುವ ಸಮಯದಲ್ಲಿ ದಿಢೀರನೆ ಹೀಗೆ ನಮ್ಮ ಸ್ನೇಹ ಭಾಂಧವ್ಯ
ಅಂತ್ಯಗೊಳ್ಳಬಹುದೆಂಬ ಕಲ್ಪನೇ ನನಗಿರಲಿಲ್ಲ.
ನೀವು ದೇವರು ಕೊಟ್ಟ ಸೋದರಿ ಎಂದು ಸಂತಸಗೊಂಡಿದ್ದೆ.
ಮೊನ್ನೆ ನೀವು ದೀಪಾವಳಿಗೆ ಹೊರಡುವ ಹಿಂದಿನ ದಿನ ನಿಮ್ಮನ್ನು ಹಬ್ಬಕ್ಕೆ ಬರಲು ಆಹ್ವಾನಿಸಿದ್ದಾಗ
 ಕೂಡನೀವು ನನ್ನೊಂದಿಗೆ ಸಹಜವಾಗಿದ್ದಿರಿ....

ಇಂಟರ್‍ನೆಟ್ನಲ್ಲಿ ಪರಿಚಯವಾದಾಗಿನಿಂದ ಒಡಹುಟ್ಟಿದ ಸೋದರಿಯಂತೆ ನಿಮ್ಮನ್ನು ಭಾವಿಸಿದ್ದೆ. ದಿನ,
 ಎರಡು ದಿನಗಳಿಗೊಮ್ಮೆ ನಿಮ್ಮ ವಿಷಯ
ತಿಳಿಯದಿದ್ದರೆ ಚಡಪಡಿಕೆ ಶುರುವಾಗುತ್ತಿತ್ತು.
ಆದರೆ ಇದು ಒಮ್ಮುಖ ಎಂಬ ಭಾವನೆಯ ಸುಳಿವೂ ನನಗೆ ತಿಳಿಯದಂತೆ ವ್ಯವಹರಿಸುತ್ತೀದ್ದಿರೆಂದು
 ತಿಳಿಯುವ ವೇಳೆಗೆ ತುಂಬಾ ಕಾಲ ಮಿಂಚಿತ್ತು.

ನನ್ನ ಸಂದೇಶಗಳಿಗೆ ಪ್ರತ್ಯ್ತುತ್ತರ ಇಲ್ಲದೇ ಹೋದಾಗ ಕಳವಳಗೊಂಡುಕರೆ ಮಾಡಿದಾಗ  ನೀವು ಸ್ವೀಕರಿಸಲಿಲ್ಲ,...
ಇದು ಮನಸ್ಸಿಗೆ ತುಂಬಾ ಆಘಾತವುಂಟು ಮಾಡಿತು.

ಮರಳಿ ಮರುದಿನ ಸಂಜೆ ಕರೆ ಮಾಡಿದಾಗ ಆಮೇಲೆ ಕರೆ ಮಾಡುವೆನೆಂದು ತಿಳಿಸಿ  ಸ್ವಲ್ಪ ಹೊತ್ತಿನಲ್ಲಿ
 ಇಂಟರ್‍ನೆಟ್ಗೆ ಬರಲು ತಿಳಿಸಿದಿರಿ. ಅದರಂತೆ ಲಾಗಿನ್ ಆದಾಗ,
ಏನು ಎತ್ತ ಎಂಬ ವಿವರಣೆ ಇಲ್ಲದೇ ಬರೀ ನನ್ನ ಮರೆತು ಬಿಡು ಎಂಬ ಪಲ್ಲವಿ-ಅನುಪಲ್ಲವಿಯೊಡನೆ
 ನಮ್ಮ ಪವಿತ್ರ ಸಂಬಂಧ ಕೊನೆಗೊಳಿಸುವ ಮಾತಿನೊಂದಿಗೆ ಸಂಪರ್ಕ
ಕಡಿತಗೊಳಿಸಿದಿರಿ.
 ಸುಮಾರು ಒಂದೂವರೆ ವರ್ಷದ ಸ್ನೇಹ , ಸೋದರ ಸಂಬಂಧ  ಈ ರೀತಿ ಪರ್ಯವಸನಗೊಳ್ಳುವದೆಂಬ
 ಕಲ್ಪನೆ ನನಗೆ ಬರಲಿಲ್ಲ.
ನಮ್ಮ ಪರಿಚಯದಲ್ಲಿ ನಾನೆಂದೂ ಸೀಮಾರೇಖೆ ಮೀರಿ ನೆಡೆದುಕೊಂಡಿರಲಿಲ್ಲ, ಅಲ್ಲವೇ?
ನನ್ನಂಥ ಭಾವನಾ ಜೀವಿಗಳು ಇಂದಿನ ಞಟಿ -ಬಿಟಿ ಯುಗಕ್ಕೆ ಅಪ್ರಸ್ತುತರೆಂದು ನಿರೂಪಿಸುವ ನಿಮ್ಮ ಪ್ರಯತ್ನ
 ಯಶಸ್ವಿಯಾದಂತೆ ತೋರುತ್ತಿದೆ...
ನನ್ನ ಯಾವ ತಪ್ಪಿಗೆ ನೀವು ನಮ್ಮ ಸಂಬಂಧ ಕಡಿದುಕೊಳ್ಳುವ ಮಾತಾಡುತ್ತಿರುವಿರೆಂದು ನನಗೆ ತಿಳಿಯುತ್ತಿಲ್ಲ.......
 ಭಾರತದಲ್ಲಿನ ಪುರಾತನ ನಂಬಿಕೆ ಎಂದರೆ ಪುನರ್‍ಜನ್ಮದ್ದು, ನಿಮಗೆ ಇದು ಹಾಸ್ಯಾಸ್ಪದ ಎನ್ನಿಸಿದರೂ
 ಚಿಂತೆಯಿಲ್ಲ, ನೀವು ಮುಂದಿನ ಜನ್ಮದಲ್ಲಾದರೂ ನನ್ನ ತಂಗಿಯಾಗಿಹುಟ್ಟಿ ಬರಲಿ ಎಂದು ಆಶಿಸುತ್ತೇನೆ.
ಆ ಸ್ಥಾನ ನಿಮಗಾಗಿ ನನ್ನ ಮನದಲ್ಲಿ  ಯಾವಾಗಲೂ ಇರುತ್ತದೆ.

ಅಗಲುವಿಕೆಯ ದು:ಖ ಮನದಲ್ಲಿ ಮಡುಗಟ್ಟಿದೆಯಾದರೂ ನೀವು ಮರಳಿ ಬರುವಿರೆಂಬ
  ನಿರೀಕ್ಷೆಯಲ್ಲಿರುವ,

ನಿಮ್ಮೊಲುಮೆಯ ಅಣ್ಣ.. (  ನಿಮ್ಮ ಕರೆಯ ನಿರೀಕ್ಷೆಯಲ್ಲಿ..)
 ಜಿತೇಂದ್ರ

ದೀಪಾವಳಿ... ದೊಡ್ಡ ಹಬ್ಬ.....







 ದೀಪಾವಳಿ ಎಂದರೆ ಎಲ್ಲರಿಗೂ ಸಂಭ್ರಮ ತರುವ ಹಬ್ಬ.
ಮಳೆಗಾಲ ಮುಗಿದು ಸುಗ್ಗಿಯ ಮಂದಹಾಸವನ್ನು ಹೊತ್ತು  ಮನೆ ಮನಗಳನ್ನು ಬೇಳಗಲು ಬರುವ ಬೆಳಕಿನ ಹಬ್ಬ.

ಇದು ಹೆಚ್ಚಾಗಿ ಕೃಷಿಕರು, ತಮ್ಮ ಪಶು-ಕರು ಗಳನ್ನು ಪೂಜಿಸುವ, ವಣಿಕರು, ವ್ಯಾಪಾರಿಗಳು ಲಕ್ಷ್ಮಿ ಪೂಜೆ ಸಲ್ಲಿಸುವ, ಒಟ್ಟಾರೆ

ನಮ್ಮ ದಿನಚರಿಯಲ್ಲಿ ಉಪಯೋಗಿಸುವ, ವಾಹನಗಳು, ಹಣ, ಗೋವು, ನಮ್ಮ ತೋಟದಲ್ಲಿ ಬೆಳೆಯುವ ಬೆಳೆಯನ್ನು ಕೊಯ್ಯುವ ಮುನ್ನ , ಹೀಗೆ ಎಲ್ಲವನ್ನು ದೇವರೆಂದೇ ಪೂಜಿಸುವ  ವಿಶಿಷ್ಟ ಹಬ್ಬ ಈ ದೀಪಾವಳಿ.

ದೀಪಾವಳಿ ಮುಂಚಿನ ದಿನ ಬೆಳಿಗ್ಗೆ ಬೂರೆ ನೀರು ತುಂಬುವದರಿಂದ ಆರಂಭ, ಸನಜೆ ಅಮವಾಸ್ಯೆ , ಲಕ್ಷ್ಮಿ ಪೂಜೆ, ಮರುದಿನ ಬೆಳಿಗ್ಗೆ ಗೋಪೂಜೆ, ವಾಹನ ಪೂಜೆ ನಂತರ ನಮ್ಮಲ್ಲಿ ಗಡಿಮೆಡ್ಡಿಲ ಪೂಜೆ ಎಂದು ನಮ್ಮ ತೋಟದ ಕೆಲಸಕ್ಕೆ ಉಪಯೋಗಿಸುವ ಆಯುಧಗಳು, ಬುಟ್ಟಿ, ಒರಳು, ಬಂದೂಕು ತಕ್ಕಡಿ ಹಾಗೂ ಮನೆ ಬಳಕೆಯಲ್ಲಿರುವ ಹಲವು ಸಾಮಗ್ರಿಗಳನ್ನು ಪೂಜಿಸಲಾಗುತ್ತದೆ.

ಬೂರೆ ದಿನ ಪೂಜೆಗೆ ಚೀನಿಕಾಯಿ ಮತ್ತು ಸವತೆಕಾಯಿ ಕಡುಬನ್ನು  ಗೋವಿಗಾಗಿ ಮಾದಿ ತಿನ್ನಿಸುತ್ತೇವೆ. ಬಹುಶ: ಯಾವ ಹಬ್ಬದಲ್ಲೂ ನಾವು ಗೋವಿಗಾಗಿ ಸಿಹಿ ಮಾಡುವುದಿಲ್ಲ...!  ಹಾಗಾಗಿ ದೀಪಾವಳಿಯಲ್ಲಿ ಗೋಪೂಜೆಗೆ ಅಗ್ರ ಸ್ಥಾನ.

ಇನ್ನು ಮನೆ , ತೋಟದ ಸುತ್ತ-ಮುತ್ತ ಇರುವ ಭೂತ, ಇತ್ಯಾದಿ ಗಣಗಳಿಗೂ ತಂಗಿನಕಾಯಿ  ಅರ್ಪಿಸುವ ಕೆಲಸ ನಡೆಯುತ್ತದೆ.


ಹಬ್ಬದ ಹೋಳಿಗೆ ಪಾಯಸದೊಂದಿಗೆ  ಭೂರಿ ಭೋಜನ ನಡೆಯುತ್ತದೆ. ಹಾಗೂ ಸಂಜೆ ಉತ್ಸಾಹಿ ಯುವಕರು ಮನೆ ಮನೆಗೆ ದೀಪ ಕೊಂಡಯ್ಯುವ ಅಂಟಿಗೆ-ಪಂಟಿಗೆ ಎನ್ನುವ (ನಮ್ಮಲ್ಲಿ ಹಬ್ಬ ಹಾಡುವದು ಎನ್ನುತ್ತಾರೆ)  ಮನರಂಜನಾ ಕಾರ್ಯಕ್ರಮ ಕೆಲವು ಊರುಗಳಲ್ಲಿದೆ.
 

Photos

Loading…

RSS

ekaviNadeduBandaDaari

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ… ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ ಕನ್ನಡವೇ ಜಾತಿ   ಕನ್ನಡವೇ ಧರ್ಮ ELLA KANNADA ABHIMAANIGALA VEDIKE INTERNATIONAL – EKAVI    ಈಕವಿ ನೆಡೆದು ಬಂದ ಹಾದಿ ಆತ್ಮೀಯ ಕನ್ನಡಿಗರೆ, ಕರ್ನಾಟಕ ಮತ್ತು ಕನ್ನಡದ ಇಂದಿನ ದುಃಸ್ಥಿತಿಯ ಅರಿವು ತಮಗೆ ಇದ್ದೇ ಇದೆ. ಅನ್ಯ ರಾಜ್ಯಗಳ ಜನಗಳು ವಲಸೆ ಬಂದು ಇಲ್ಲಿ ತಮ್ಮದೇ ಭಾಷೆ [...]

PRESS RELEASE of ekavi of Inaguration October 4th 2003

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ  ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ… ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ ಕನ್ನಡವೇ ಜಾತಿ   ಕನ್ನಡವೇ ಧರ್ಮ ELLA KANNADA ABHIMAANIGALA VEDIKE INTERNATIONAL – EKAVI   For your information: Press Release FOR IMMEDIATE RELEASE IRVINE, CALIFORNIA, USA – Kannadigas are extremely happy and proud that celebrated famous author and dramatist, Former [...]

EKAVI is a Total Kannada Organization

EKAVI is a Total Kannada Organization   EKAVI NETWORK  of KANNADIGAS all over the world ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…   Make your friends to join EKAVI for KANNADA cause. Become a Committee person to handle issues. Take your friends to the EKAVI meeting. EKAVI is an International Kannada Vedike [...]

ekavi Meeting and Directions

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ… ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ ಕನ್ನಡವೇ ಜಾತಿ   ಕನ್ನಡವೇ ಧರ್ಮ ELLA KANNADA ABHIMAANIGALA VEDIKE INTERNATIONAL – EKAVI     ಈಕವಿ ಸಭೆ, ಬೆಂಗಳೂರು ನಲ್ಲಿ , ರವಿವಾರ , ಅಕ್ಟೋಬರ್ ೪ ೨೦೦೯ , ೪ ಗಂಟೆಗೆ ಇದೆ.   ಸಭೆ ನಡೆಯುವ ವಿಳಾಸ: 12, ಸುಮೇರು, ಸರ್ ಎಂ. ಏನ್. ಕೃಷ್ಣರಾವ್ ರಸ್ತೆ. ಬಸವನಗುಡಿ, ಬೆಂಗಳೂರು 560004. __________________   EKAVI [...]

NIMMA JILLEGE ekavi jothe serikondu SAHAYA maadi

ಈಕವಿ ಸಂಸ್ಥೆ ಯು ಇದುವರೆಗೂ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ೨೦೦೩ ರರಿಂದ ಇಂದಿನವರೆಗೂ ಕನ್ನಡಕ್ಕಾಗಿ ಸೇವೆ , ಕನ್ನಡಿಗರಿಗೆ ಸಹಾಯ, ಮಾಡುತ್ತಾ ಬಂದಿದೆ. ಆದ್ದರಿಂದ ಆಸಕ್ತಿ ಇರುವ ವಿದ್ಯಾವಂತ ಯುವಕ ಯುವತಿಯರಿಗೆ ತಮ್ಮ  ತಮ್ಮ ಜಿಲ್ಲೆ, ತಾಲ್ಲೂಕು, ಹಳ್ಳಿ, ಹೋಬಳಿಗಳಿಗೆ ಏನಾದರು ಸೇವೆ ಸಲ್ಲಿಸುವ ಆಸಕ್ತಿ ಇರುವವರನ್ನು ಪ್ರೋತ್ಸಾಹಿಸಲು ಈ-ಕವಿ ವೇದಿಕೆಯು ಸಜ್ಜಿಸಲಾಗಿದೆ.   ಬೆಂಗಳೂರಿನಲ್ಲಿ, ಹೊರರಾಜ್ಯದಲ್ಲಿ ಮತ್ತು ಹೊರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾ [...]

Blog Posts

Lohith L Narayana

ಕನ್ನಡ ಬಳಕೆ ಕೈಪಿಡಿ





ಇಲ್ಲಿ ನೋಡಿ ಇದು ಒಂದು ಕ್ಯವಿನ ಕೇರ್ ಉತ್ಪನ್ನ... ಇದನ್ನು ಕನ್ನಡದಲ್ಲಿ ಮುದ್ರಿಸಿರೋ ಇವರು ಇವರ ಇತರೆ ಯಾವ ಉತ್ಪನ್ನಗಳಿಗೂ ಇ ತರಹ ಮುದ್ರಿಸಿಲ್ಲ... ಎಲ್ಲರಿಗು ಇಂತಹ ಒಳ್ಳೆ ಬುದ್ದಿ ಬರಲಿ... ನಮ್ಮ ಕನ್ನಡದ ಉದ್ಯಮಿಗಳೇ ಕನ್ನಡದಲ್ಲಿ ಮುದ್ರಿಸುವುದಿಲ್ಲ... ದ… Continue

Posted by Lohith L Narayana on October 31, 2009 at 11:14am

EKAVI ಈಕವಿ TUMKUR

ಪ್ರವಾಹ ಪರಿಸ್ಥಿತಿಯಿಂದ ಹಾನಿಗೊಳಗಾಗಿರುವ ಉತ್ತರ ಕರ್ನಾಟಕದ ಜನತೆಗೆ , ಎಲ್ಲರೂ ನಮ್ಮ ನಮ್ಮ ಕೈಲಾದಷ್ಟು ಸಹಾಯ ಮಾಡೋಣ




ಪ್ರವಾಹ ಪರಿಸ್ಥಿತಿಯಿಂದ ಹಾನಿಗೊಳಗಾಗಿರುವ ಉತ್ತರ ಕರ್ನಾಟಕದ ಜನತೆಗೆ , ಎಲ್ಲರೂ ನಮ್ಮ ನಮ್ಮ ಕೈಲಾದಷ್ಟು ಸಹಾಯ ಮಾಡೋಣ
ಪ್ರವಾಹ ಪರಿಸ್ಥಿತಿಯಿಂದ ಹಾನಿಗೊಳಗಾಗಿರುವ ಉತ್ತರ ಕರ್ನಾಟಕದ ಜನತೆಗೆ ಎಲ್ಲ ಕನ್ನಡ ಸಂಘಗಳು ಸ್ಪಂದಿಸಬೇಕಾಗಿದೆ ..
ಆದ್ದರಿಂದ ಎಲ್ಲರೂ ನಮ್ಮ ನಮ್ಮ ಕೈಲಾದಷ್ಟು ಸಹಾಯ ಮಾಡೋಣ . ಈಕವಿ ಹಣ ಸಂಗ್ರಹಿಸಿ ಚೆಕ್ ಮೂಲಕ ಕೊಡೋಣ
ಇದನ್ನು ಕಾರ್ಯಗತಗೊಳಿಸಲು ಇನ್ನ್ಯಾವುದೇ ಸಲಹೆ ಸೂಚನೆಗಳಿದ್ದರೆ ತಿಳಿಸಿ.

EKAVI… Continue

Posted by EKAVI ಈಕವಿ TUMKUR on October 6, 2009 at 4:43pm

EKAVI ಈಕವಿ TUMKUR

by ranjith of Chikamagalur

Posted by EKAVI ಈಕವಿ TUMKUR on September 25, 2009 at 11:31am

EKAVI ಈಕವಿ TUMKUR

by ranjith of Chikamagalur

Posted by EKAVI ಈಕವಿ TUMKUR on September 25, 2009 at 11:30am

RAJASHEKHAR

Malegavana

“ªÀļÉUÀªÀ£À”

ªÀļÉAiÀÄÄ §gÀÄwzÉ
ªÀÄ£ÀªÀÅ vÀt¢zÉ
ªÀÄĢݣÀ ªÀÄqÀ¢AiÀÄ ªÀÄ£ÀzÀ°è
D¸ÉUÀ¼À CgÀªÀÄ£É PÀlÄÖªÁ¸ÉAiÀiÁVzÉ
©zÀĪÀÅ ªÀiÁr PÉÆqÀĪÉAiÀiÁ ªÀļÉgÁAiÀÄ?
ªÀÄÄwÛ£À ºÀ¤UÀ¼À£ÀÄß CgÀ¸ÀÄvÀ
Nr ºÉÆUÀÄªÉ ªÀÄqÀ¢AiÀÄ ªÀÄr°UÉ
©qÀĪÀÅ ªÀiÁr PÉÆqÀĪÉAiÀÄ ªÀi¼ÉgÁAiÀÄ?

“¸ÀÆàwð”

Posted by RAJASHEKHAR on September 21, 2009 at 11:00pm

RSS

"ಸಹಿ"ಗನ್ನಡದಿಂದ ಗ್ರಾಹಕ ಸೇವೆಯಲ್ಲಿ ಕನ್ನಡ!

*****



ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸದಿಂದ, ಬ್ಯಾಂಕೊಂದರಲ್ಲಿ (ಕರ್ನಾಟಕದಲ್ಲಿ!) ವ್ಯವಹರಿಸುವಾಗ ಅನುಭವಿಸಿದ ಕಿರಿಕಿರಿಯ ಅನುಭವವನ್ನು "ಕನ್ನಡ, ಕನ್ನಡ ಹಾ ಸಹಿಗನ್ನಡ" ಲೇಖನದ ಮೂಲಕ ('ಹಾಯಿದೋಣಿ' ಅಂಕಣ, ಸಾಪ್ತಾಹಿಕ ಪುರವಣಿ, ಪ್ರಜಾವಾಣಿ, ೧ನೇ ನವಂಬರ್ ೨೦೦೯) ಶ್ರೀಯುತ ಲಕ್ಷ್ಮಣ ಕೊಡಸೆಯವರು ಕನ್ನಡಿಗರ ಹಕ್ಕಾಗಬೇಕಾಗಿರುವ "ಕನ್ನಡದಲ್ಲಿ ಗ್ರಾಹಕ ಸೇವೆ"ಯ ಬಗ್ಗೆ ಕನ್ನಡಿಗರು ತೋರಿರುವ ನಿರ್ಲಕ್ಷ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬ ಘೋಷಣೆಗೆ ಆಕರ್ಷಣೆಗೊಳ್ಳುವುದು, ಕನ್ನಡ ಭಾಷೆಯನ್ನುಳಿಸಲು ಸರ್ಕಾರವೇ ಕ್ರಮ ತೆಗೆದುಕೊಳ್ಳಬೇಕೆಂದುಕೊಳ್ಳುವುದು, ಇತರ ಭಾಷಿಕರಿಗೆ ಹೋಲಿಸಿಕೊಂಡು ನಾವು ನಿರಭಿಮಾನಿಗಳೆಂದುಕೊಳ್ಳುವ ಈ ಯಾವುದು ನಮ್ಮ ಕನ್ನಡ ಭಾಷೆಯ ಉನ್ನತಿಗೆ ಪರಿಹಾರವಲ್ಲ. ಕನ್ನಡಕ್ಕೆ ಶಕ್ತಿ ತುಂಬುವ ಕೆಲಸದಲ್ಲಿ ನಮ್ಮ-ನಿಮ್ಮಂತ ಶ್ರೀ ಸಾಮಾನ್ಯನ ಪಾತ್ರ ಬಹಳ ಹಿರಿದಾದದ್ದು ಎಂಬ ಮಾತುಗಳನ್ನು ಕೊಡಸೆಯವರು ಈ ಮೂಲಕ ತಿಳಿಹೇಳಿದ್ದಾರೆ.

ಸಹಿ ಎಂಬುದು ವ್ಯಕ್ತಿಯೊಬ್ಬನ ವೈಯುಕ್ತಿಕ ಸಂಕೇತ, ತನ್ನ ಅಭಿ ವ್ಯಕ್ತಿಯ ಲಾಂಛನ ಎಂಬುದು ನೂರಕ್ಕೆ ನೂರು ಸತ್ಯ. ಅಂತೆಯೇ ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾಗಿ ಹೊರ ಹೊಮ್ಮಿರುವ ಭಾರತದ, ಕರ್ನಾಟಕ ಪ್ರಾಂತ್ಯದ ಭಾಷೆ ಕನ್ನಡ ಎಂಬುದು ಸಹ ಅಷ್ಟೆ ಸತ್ಯವಾದದ್ದು. ಕರ್ನಾಟಕದಲ್ಲಿ ಕನ್ನಡದ ಬಳಕೆಗೆ, ಕನ್ನಡಿಗರ ಅಭಿವೃದ್ಧಿಗೆ ಸಂವಿಧಾನ ನಮಗೆ ಸವಲತ್ತು ಒದಗಿಸಿದೆ. ಇದರಂತೆ ಕರ್ನಾಟಕದಲ್ಲಿನ ಎಲ್ಲಾ ವ್ಯವಹಾರಸ್ಥರು ಕನ್ನಡ ಅರಿತವರಾಗಿ ತಮ್ಮ ಎಲ್ಲಾ ವ್ಯವಹಾರದಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳಬೇಕಾಗಿರುವುದು ಅವರ ಮೂಲ ಧರ್ಮವಾಗಬೇಕಾದದ್ದು ಸಹಜವಾದದ್ದು. ಮುಖ್ಯವಾಗಿ ನಾವು ಎಲ್ಲರೊಡನೆ ಕನ್ನಡದಲ್ಲಿ ವ್ಯವಹರಿಸುವಂತಾದರೆ ಮಾತ್ರ ನಮ್ಮ ಹಕ್ಕಿಗೂ ಬೆಲೆ ಬರುತ್ತದಲ್ಲವೆ? ಇಲ್ಲಿ ನಾವು ಗಮನಿಸಬೇಕಾಗಿರುವುದು, ನಮ್ಮ ದಿನ ನಿತ್ಯದ ವ್ಯವಹಾರಗಳಲ್ಲಿ ಕನ್ನಡದಲ್ಲೇ ವ್ಯವಹರಿಸುವುದರಿಂದ ಸಣ್ಣ ರೀತಿಯಲ್ಲಿ ನಾವು ಒಂದು ಆಂದೋಲವನ್ನೇ ಹುಟ್ಟು ಹಾಕಬಹುದಾಗಿದೆ.

ಹೌದು ಕರ್ನಾಟಕದಲ್ಲಿ, 'ಕನ್ನಡದಲ್ಲಿ ಗ್ರಾಹಕ ಸೇವೆ' ಕುರಿತಾಗಿ ನಾನು ಇಲ್ಲಿ ಹೇಳ್ತಾ ಇದೀನಿ. ಬ್ಯಾಂಕಿನಲ್ಲಿ ಕನ್ನಡ ಇಲ್ಲ ಅಂದ್ರೆ, ಅವರು ಕನ್ನಡದಲ್ಲಿ ಸೇವೆ ಕೊಡ್ದೆ ಇರೋದು ಒಂದು ಕಾರಣವಾದರೆ, ನಾವು ಕನ್ನಡ ಉಪಯೋಗಿಸದೆ ಇರೋದು ಇನ್ನೊಂದು ಕಾರಣ. ಅದಕ್ಕಗಿ ನಾವು ಹೀಗೆ ಮಾಡಬಹುದಲ್ಲವೇ.

೧] ಕೇವಲ ಸಹಿ ಮಾತ್ರವಲ್ಲ! ಇನ್ನು ಮುಂದೆ ನಾವು ನಮ್ಮ ಬ್ಯಾಂಕು ಚೆಕ್ಕುಗಳನ್ನು ಕನ್ನಡದಲ್ಲೇ ಬರೆಯೋಣ
೨] ಬ್ಯಾಂಕಿನ ಎಟಿಎಂ ಉಪಯೋಗಿಸುವಾಗ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳೋಣ
೩] ಬ್ಯಾಂಕಿನೊಡನೆ ಯಾವುದೇ ವ್ಯವಹಾರವಿರಲಿ ಪತ್ರ ವ್ಯವಹಾರ ಕನ್ನಡದಲ್ಲೇ ಮಾಡೋಣ
೪] ಬ್ಯಾಂಕಿನ ಕರೆ ಕೇಂದ್ರಗಳಿಂದ ಕರೆ ಬಂದಾಗ ಅಥವ ನಾವು ಅವರಿಗೆ ಕರೆ ಮಾಡಿದಾಗ ಕನ್ನಡದಲ್ಲಿ ಮಾತನಾಡಲು ಆಗ್ರಹಿಸೋಣ
೫] ಬ್ಯಾಂಕಿನಲ್ಲಿ ಖಾತೆ ತೆರೆಯುವಾಗ, ಬ್ಯಾಂಕಿಗೆ ಹಣ ತುಂಬುವಾಗ, ಹಣ ತೆಗೆಯುವಾಗ ಕನ್ನಡದ ಅರ್ಜಿ ನಮೂನೆಗಳಿಗೆ ಆಗ್ರಹಿಸೋಣ. ಅವರು ಕೊಡುವ ನಮೂನೆಗಳಲ್ಲಿ ಕನ್ನಡದಲ್ಲೇ ಎಲ್ಲ ವಿವರಗಳನ್ನು ನಮೂದಿಸೋಣ.
ಇದು ಬ್ಯಾಂಕಿನವರಿಗೆ ಕನ್ನಡದ ಅನಿವಾರ್ಯತೆಯನ್ನು ಹುಟ್ಟು ಹಾಕುತ್ತದೆ. ಕನ್ನಡಿಗರಿಗೆ ಕೆಲಸ ದೊರೆಯುತ್ತದೆ. ಕನ್ನಡ ಬರದ ಕೆಲಸಗಾರರು ಕನ್ನಡ ಕಲಿಯಬೇಕಾದ ಅನಿವಾರ್ಯತೆಯನ್ನು ಉಂಟು ಮಾಡುತ್ತದೆ.

ಇದು ಕೇವಲ ಬ್ಯಾಂಕ್ ಗೆ ಮಾತ್ರ ಸೀಮಿತವಲ್ಲ. ನಾವು ಗ್ರಾಹಕ ಸೇವೆ ಪಡೆಯೋ ಎಲ್ಲೆಡೆ (ರೈಲು, ಬಸ್ಸು ಟಿಕೆಟ್ಟು ಖರೀದಿಸುವಾಗ, ವಿಮಾ ಕಂಪನಿಗಳೊಡನೆ ವ್ಯವಹರಿಸುವಾಗ, ಮೊಬೈಲ್ ಕಂಪನಿಗಳ ಕರೆ ಕೇಂದ್ರದವರೊಡನೆ ಮಾತನಾಡುವಾಗ, ಅಂಗಡಿ-ಮುಂಗಟ್ಟು-ಮಾಲ್ ಗಳಲ್ಲಿ ವ್ಯವಹರಿಸುವಾಗ) ಕನ್ನಡವನ್ನು ಈ ರೀತಿ ನಾವು ಉಪಯೋಗಿಸುವ ಹಕ್ಕು ನಮಗಿದೆ.


ಇದು ಅಭಿಮಾನ ಮತ್ತು ನಮ್ಮ ಅಂತಂಗದ ಧ್ವನಿಯಾಗಿ ಹೊರಹೊಮ್ಮುವಂತಾಗಬೇಕು ಎಂಬುದು ಕೊಡಸೆಯವರ ಅಭಿಲಾಷೆ.

ಎಲ್ಲರಿಗೂ "ಕರ್ನಾಟಕ ರಾಜ್ಯೋತ್ಸವ" ಶುಭಾಶಯಗಳು.

ಚಂದ್ರಶೇಖರನ್ ಕಲ್ಯಾಣ ರಾಮನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****

ಯಾರು "ಗ್ರಾಹಕ ಕೈಪಿಡಿ" ಕನ್ನಡದಲ್ಲಿ ಮಾಡಿಸಿದ್ದಾರೆ?

***

ಕೆಲ ದಿನಗಳ ಹಿಂದೆ ಬಜಾಜ್ ಸಂಸ್ಥೆಯ "ಇಸ್ತ್ರಿ ಪೆಟ್ಟಿಗೆ ಖರೀದಿಸಿದೆ". ಮನೆಗೆ ಬಂದು ಡಬ್ಬ ತೆರೆದಾಗ ಅದರಲ್ಲಿ ಕೈಪಿಡಿಯೊಂದಿತ್ತು. ತೆರೆದು ನೋಡಿದಾಗ ಬೇಜಾರಾಯ್ತು. ಮಾಹಿತಿ ಕನ್ನಡೇತರ ಭಾಷೆಯಲ್ಲಿದೆ.
ಹಾಗೆಯೆ ಕೈಪಿಡಿ ಗಮನಿಸಿದಾಗ, ಬಜಾಜ್ ಸಂಸ್ಥೆಯ ಬೆಂಗಳೂರು ಶಾಖೆಯ ಮಿಂಚೆ ವಿಳಾಸ ಕಂಡು ಬಂತು.
ಮೊನ್ನೆ ೨೬ ನೆ ತಾರೀಖು ಅವರಿಗೆ ಈ ರೀತಿ ಮಿಂಚಿಸಿದೆ.
*****
ನಾನು 18/10/2009 ರಂದು ಬೆಂಗಳೂರಿನ ಪೈ ಇಂಟರ್ ನ್ಯಾಷನಲ್ ಅಂಗಡಿಯಲ್ಲಿ ಬಜಾಜ್ಎಲೆಕ್ಟ್ರಿಕಲ್ಸ್ ತಯಾರಿಕೆಯ ಪಾಪ್ಯುಲರ್ "ಇಸ್ತ್ರಿ ಪೆಟ್ಟಿಗೆ" ಖರೀದಿಸಿದೆ. ವಿಪರ್ಯಾಸವೆಂದರೆ ಇಸ್ತ್ರಿ ಪೆಟ್ಟಿಗೆಯ ಜತೆಗೆ ವಿತರಿಸಿರುವ "ಉಪಯೋಗ ಮತ್ತುಸುರಕ್ಷತೆ" ಯ ಕೈಪಿಡಿ ಕನ್ನಡೇತರ ಭಾಷೆಯಲ್ಲಿದೆ. (ಲಗತ್ತಿಸಿರುವ ಚಿತ್ರ ನೋಡಿ)

ಬೆಂಗಳೂರು ಮತ್ತು ಕರ್ನಾಟಕ ದೇಶದ ನಾಡ ಭಾಷೆ ಕನ್ನಡ. ಇಲ್ಲಿ ನಿಮ್ಮ ಸಂಸ್ಥೆಯ ಮೂಲಕತಯಾರಿಸಿ ವಿತರಿಸುವ ಎಲ್ಲಾ ಗ್ರಾಹಕ ಉಪಯೋಗಿ ವಸ್ತುಗಳ ಬಗೆಗಿನ ಮಾಹಿತಿ, ವಿವರಣೆ,ಜಾಹೀರಾತು ಆಧ್ಯತೆಯಾಗಿ ಕನ್ನಡ ಭಾಷೆಯಲ್ಲಿರುವಂತೆ ಗಮನಿಸಬೇಕಾದ್ದು ನಿಮ್ಮ ಮೂಲಕರ್ತವ್ಯ.

ಕೂಡಲೇ ಕೆಳಗಿನ ವಿಳಾಸಕ್ಕೆ ಇಸ್ತ್ರಿ ಪೆಟ್ಟಿಗೆ "ಉಪಯೋಗ ಮತ್ತು ಸುರಕ್ಷೆ" ಕನ್ನಡಕೈಪಿಡಿ ಕಳುಹಿಸಿಕೊಡಬೇಕಾಗಿ ವಿನಂತಿ.
*****
ನಂತರ ೦೮೦-೪೨೬೬೨೨೩೧ ದೂರವಾಣಿಯಿಂದ ನನಗೆ ಕರೆಯೊಂದು ಬಂತು. ಕರೆ ಮಾಡಿದಾತ "ನನ್ನ ಹೆಸರು ವಿಜಯ್, ಬಜಾಜ್ ಬೆಂಗಳೂರು ಅಫೀಸ್ ನಿಂದ ಕರೆ ಮಾಡ್ತಿದ್ದೀನಿ" ಎಂದು ಪರಿಚಯಿಸಿಕೊಂಡು, ನನ್ನ ಮಿಂಚೆ ಕುರಿತು ಸಮಜಾಯಿಷಿ ಕೊಡಲು ಪ್ರಯತ್ನಿಸಿದರು. ಮಾತನಾಡುತ್ತ ವಿಜಯ್ ಹೇಳಿದ್ದು "ಕನ್ನಡದಲ್ಲಿ ಕೈಪಿಡಿ ಮಾಡಿಸಿಲ್ಲ, ಪೂರ್ತಿ ಭಾರತ! ಗಮನದಿಲ್ಲಿಟ್ಟುಕೊಂಡು ಎರಡು ಭಾಷೆಯಲ್ಲಿ ಕೈಪಿಡಿ ಮಾಡಿದ್ದೇವೆ......

ನಾನು "ನಮ್ಮ ಮನೆಯಲ್ಲಿ ಬಜಾಜ್ ಸಂಸ್ಥೆ ಇಸ್ತ್ರಿ ಪೆಟ್ಟಿಗೆಯ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲು ನಮಗೆ ಅವಶ್ಯವಿರುವ ಭಾಷೆ ಕನ್ನಡ" ಕನ್ನಡೇತರ ಭಾಷೆಯ ಕೈಪಿಡಿ ನಮಗೆ ಉಪಯೋಗವಿಲ್ಲ. ಇಡೀ ಭಾರತ! ಗಮನದಲ್ಲಿರಿಸಿ ನೀವು ಕೈಪಿಡಿ ತಯಾರಿಸಿರುವುದಾದರೆ ೨೦ಕ್ಕೂ ಹೆಚ್ಚಿನ ಭಾಷೆ ನಿಮ್ಮ ಕೈಪಿಡಿಯಲ್ಲಿ ಅಳವಡಿಸಬೇಕಿತ್ತು... ಹೀಗೆ ಕರ್ನಾಟಕದಲ್ಲಿ ಅವರ ವ್ಯವಹಾರದಲ್ಲಿ ಕನ್ನಡದ ಅವಶ್ಯಕತೆ ಏಕೀರಬೇಕು. ಅಂತೆಯೆ ತಮಿಳುನಾಡಿನಲ್ಲಿ ಬಜಾಜ್ ತಮಿಳನ್ನೇ ಏಕೆ ಉಪಯೋಗಿಸಬೇಕು ಎಂದು ಮನವರಿಕೆ ಮಾಡಿಸಲು ಪ್ರಯತ್ನಿಸಿದೆ! ಕೊನೆಗೆ ವಿಜಯ್, ಈ ಕುರಿತಾಗಿ ಬಜಾಜ್ ಮುಖ್ಯ ಕಚೇರಿಗೆ ತಿಳಿಸಿ ಕನ್ನಡದಲ್ಲಿ ಕೈಪಿಡಿ ಮಾಡಿಸಿ ಕೊಡುವಬಗ್ಗೆ ಭರವಸೆ ನೀಡಿದ್ದಾರೆ!

ವಿಜಯ್ ಕೊನೆಯದಾಗಿ ಒಂದು ಪ್ರಶ್ನೆ ನನ್ನನ್ನೇ ಕೇಳಿದರು. ಈ ರೀತಿ ವಸ್ತುಗಳನ್ನು ತಯಾರಿಸಿರುವವರು ಯಾರು ಕೈಪಿಡಿ ಕನ್ನಡದಲ್ಲಿ ಮಾಡಿಸಿದ್ದಾರೆ ಎಂದು? "ಯಾರು ಮಾಡಿಸಿದ್ದಾರೆ ಎಂಬ ಮಾಹಿತಿ ನನ್ನಲ್ಲಿಲ್ಲ, ಯಾರ್ಯಾರು ಮಾಡಿಸಿಲ್ಲ ಎಂದು ನನಗೆ ಕಂಡು ಬಂದಾಗ ಕನ್ನಡದಲ್ಲಿ ಮಾಡಿಸಿ ಎಂದು ನಾನು ಕೇಳುತ್ತೇನೆ. ನೀವು ಮಾಡಿಸಿಲ್ಲ ಈಗ ನೀವು ಮಾಡಿಕೊಡಿ ಎಂದೆ.

ಇದನ್ನೂ ಓದುತ್ತಿರುವವರೆಲ್ಲಾ ಇನ್ನು ಮುಂದೆ ತಾವು ಖರೀದಿಸುವ ಯಾವುದೇ ವಸ್ತು ಇರಲಿ (ಟಾಟಾ ಸ್ಕೈ, ಸಾಮ್ಸಂಗ್ ಟೀವಿ, ಓನಿಡಾ ಒಗೆಯೋ ಯಂತ್ರ, ಫಿಲಿಪ್ಸ್ ರೇಡಿಯೋ...............ಹೀಗೆ) ಕನ್ನಡದಲ್ಲಿ ಇದರ ಮಾಹಿತಿ, ವಿವರಣೆ, ಕೈಪಿಡಿ ವಿತರಿಸಿ ಎಂದು ಕೇಳಲೇ ಬೇಕಲ್ಲವೆ?

ಕೆಳಗಿನ ಚಿತ್ರ ನೋಡಿ.

ಯೂರೋಪ್ ನಲ್ಲಿ ತಯಾರಾದ ಜೀವ ಕವಚವೊಂದರ ಕುರಿತಾದ ವಿವರಣೆ. ಇಡೀ ಪ್ರಪಂಚಕ್ಕೆ ತಿಳಿಯತ್ತಲ್ಲ ಅಂತ ಅವರು ಒಂದು ಭಾಷೆಯಲ್ಲಿ ಅದರ ವಿವರಣೆ ನೀಡಿ ಸುಮ್ಮನಿರಬಹುದಿತ್ತು. ಆದರೆ ಜೀವದ ಬೆಲೆ ಅವರಿಗೆ ಏನೆಂದು ಗೊತ್ತು ಮತ್ತು ವಸ್ತುವಿನ ಬಳಕೆ ಸಮರ್ಪಕವಾಗಿ ಆಗಬೇಕೆಂಬ ಕಾಳಜಿ ಅವರಿಗಿದ್ದುದರಂದ ಅವರು ತಮ್ಮ ಉತ್ಪನ್ನ ವಿತರಿಸುವೆಡೆಯಲ್ಲಿ ಬಳಕೆಯಲ್ಲಿರುವ ಭಾಷೆಗಳಲ್ಲಿ ವಿವರಣೆ ನೀಡಿದ್ದಾರೆ.

ತಮ್ಮ ಉತ್ಪನ್ನಗಳ ಹೆಚ್ಚಿನ ಬಿಕರಿಗೆ ಇದೊಂದು ದಾರಿ ಸಹ ಅಂತ ಇವರು ತಿಳಿದುಕೊಂಡಿದ್ದಾರೆ. ನಮ್ಮ ಭಾರತದ ಸಂಸ್ಥೆಗಳು ಇಲ್ಲದ್ದನ್ನು ನಮ್ಮ ಮೇಲೆ ಹೇರಲು ಮುಂದಾಗಿದ್ದಾರೆ.

ಚಂದ್ರಶೇಖರನ್ ಕಲ್ಯಾಣ ರಾಮನ್,
ಹಳದಿ - ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

***

ಇತರ ಭಾಷಿಕರಿಗೆ ದೀಪಾವಳಿ ಶುಭಾಶಯ, ಕನ್ನಡಿಗರಿಗೆ ಮಾತ್ರ "ದಿವಾಳಿ" ಯ ಶಾಪ!

*****
ಇವತ್ತಿನ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ಭಾರತೀಯರೆಲ್ಲರಿಗೂ ದೀಪಾವಳಿ ಶುಭಾಶಯ ತಿಳಿಸಿದೆ. ಲಗತ್ತಿಸಿರುವ ಚಿತ್ರ ಗಮನಿಸಿ.


ಲಕ್ಷ್ಮಿಯ ಬಲಗೈ ಯಿಂದ ಭಾರತೀಯ ಭಾಷೆಗಳಲ್ಲಿ ಶುಭಾಶಯದ ಹೊಳೆ ಹರಿದಿದೆ. ತಮಿಳಿನಲ್ಲಿ ದೀಪಾವಳಿ ವಾಳ್ತುಕ್ಕಳ್, ತೆಲುಗಿನಲ್ಲಿ ಹ್ಯಾಪಿ ದೀಪಾವಳಿ, ಗುಜರಾತಿ, ಬಂಗಾಳಿ, ಹಿಂದಿ ಹೀಗೆ ಇನ್ನಿತರ ಭಾಷೆಗಳಲ್ಲಿ ಶುಭ ದೀಪಾವಳಿ ಎಂದು ಶುಭಾಶಯ ತಿಳಿಸುತ್ತಿದೆ.

ಕನ್ನಡಿಗರಿಗೆ ಕೊಟ್ಟಿರುವ ಶಾಪ ಏನು ಗೊತ್ತ! ಲಕ್ಷ್ಮಿಯ ಎಡಕ್ಕಿರುವ ಆನೆ ಸೊಂಡಿಲ ಪಕ್ಕ ನೋಡಿ. "ಹಾ ಪಿ ದಿವಾಳಿ".
ಹ್ಯಾಪಿಗೇನೋ ಅರ್ಥ ಗೊತ್ತಿರುವುದೆ (ಆ 'ಹ್ಯಾಪಿ' ನೂ ಸಹ ಇವರು ಸರಿಯಾಗಿ ನಮೂದಿಸಿಲ್ಲ. 'ಹಾ' ಕೆಳಗಿನ 'ಯ' ಕಾರ ಎಗರಿ ಹೋಗಿದೆ).

"ದಿವಾಳಿ" ಅಂದ್ರೆ ಏನು ಅಂತ ನಿಮಗೆ ಗೊತ್ತಿರಬಹುದು! ಒಮ್ಮೆ ಪದಕೋಶದ ಪುಟ ಸಹ ನೋಡಿ.


ಈ ಜಾಹೀರಾತಿನಿಂದ ಸಾಬೀತಾಗುತ್ತದೆ. "ದೀಪಾವಳಿ" ನ "ದೀಪಾವಳಿ" ಅಂತಾನೆ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿ ಹೇಳೋದು ಅಂತ. ಕನ್ನಡದಲ್ಲೂ ನಾವು "ದೀಪಾವಳಿ" ಅಂತಾನೆ ಹೇಳ್ತಿದ್ದಿದ್ದು. ಈ "ದಿವಾಳಿ" ಹಾವಳಿ ಕನ್ನಡಿಗರ ಮೇಲೆ ಹೇಗೆ ಯಾವಾಗ ಎಲ್ಲಿಂದ ಶುರು ಆಯ್ತು ಅನ್ನುವುದೆ ಪ್ರಶ್ನೆ?

ರಾಜ್ಯಾದ್ಯಂತ ನೆರೆ ಉಂಟಾಗಿ ಬೀದಿಗೆ ಬಿದ್ದಿರುವ ಕನ್ನಡಿಗರಿಗೆ ಈ ರೀತಿಯಾಗಿ "ದಿವಾಳಿ" ಪಟ್ಟ ಕಟ್ಟುತ್ತಿದ್ದಾರೆಯೆ?
ಖಂಡಿತಾ ನಾವು ದಿವಾಳಿಯಾಗುವುದು ಬೇಡ. ದೀಪವನ್ನು ಬೆಳಗಿಸಿ ದೀಪಾವಳಿ ಆಚರಿಸೋಣ. ಸಮಸ್ತ ಕನ್ನಡಿಗರ ಬಾಳಿನಲ್ಲಿ ಈ ದೀಪಾವಳಿ ಹೊಸ ಬೆಳಕನ್ನು ಮೂಡಿಸುವಂತಾಗಲಿ...
**
ಚಂದ್ರಶೇಖರನ್ ಕಲ್ಯಾಣ ರಾಮನ್
*****
 
 

About

Events

Groups

RSS

ಉತ್ತಮ ಲೇಖನ ಬರೆಯಲು ಕೆಲವು ಸೂಚನೆಗಳು



ಲೇಖಕಿ: ಬೀನಾ ಶ್ರೀಧರ್


ನೀವು ಬರೆಯುವ ಲೇಖನವು ಎಲ್ಲರ ಗಮನ ಸೆಳೆಯುವಂತಿರಬೇಕು. ಅದಕ್ಕಾಗಿ ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕ್ಕೊಳ್ಳಬೇಕು. ನಿಮಗೆ ಆಸಕ್ತಿ ಇರುವ ವಿಷಯವನ್ನು ಬರೆಯಲು ಆರಿಸಿಕೊಳ್ಳಿ. ಈ ವಿಷಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ. ಅದರ ಬಗ್ಗೆ ಜನರ ಅನಿಸಿಕೆಗಳೇನು ಎಂದು ತಿಳಿದುಕ್ಕೊಳ್ಳಿ. ಅದರ ಮೇಲೆ ಸ್ವಲ್ಪ ಸಮಯ ಆಲೋಚಿಸಿ ಮತ್ತು ಅಧ್ಯಯನ ಮಾಡಿ. ಮುಖ್ಯವಾಗಿರುವ ಸಂಗತಿಗಳನ್ನು ಒಂದೆಡೆ ಬರೆದು ಇಡಿ. ಹೀಗೆ ಮಾಡುವುದರಿಂದ ಅವು ಲೇಖನ ಬರೆಯುವಾಗ ಬಿಟ್ಟು ಹೋಗುವುದಿಲ್ಲ. ನಿಮ್ಮ ಆಲೋಚನೆಗಳು, ನಿಮ್ಮ ಮನಸ್ಸಿನಿಂದ ನೇರವಾಗಿ ನಿಮ್ಮ ಲೇಖನಿಗೆ ಹರಿದು ಬರಲಿ. ಲೇಖನವನ್ನು ಕ್ರಮಬಧ್ಧವಾಗಿ ಹಾಗು ಚಿಕ್ಕ ವಾಕ್ಯವೃಂದದಲ್ಲಿ ಬರೆಯಿರಿ.



ಲೇಖನವನ್ನು ಹಲವು ಭಾಗಗಳಲ್ಲಿ ವಿಭಜಿಸಿ ಬರೆಯಬೇಕು. ಅವು ಈ ಕೆಳಗಿನಂತಿವೆ:

೧. ವಿಷಯದ ಶೀರ್ಷಿಕೆ:- ಜನರ ಮನಸೆಳೆಯುವ ಆಕರ್ಷಕವಾದ ಶೀರ್ಷಿಕೆಯನ್ನು ಆಯ್ದು ಬರೆಯಿರಿ.

೨. ವಿಷಯದ ಪರಿಚಯ ನೀಡಿ:- ಶೀರ್ಷಿಕೆಯ ವ್ಯಾಖ್ಯಾನವನ್ನು ಕೊಟ್ಟು, ವಿಷಯದ ಮುನ್ನೋಟವನ್ನು ವಿವರಿಸಿ.

೩. ವಿಷಯದ ಸಾರವನ್ನು ಬರೆಯಿರಿ:- ಸಕಾರಾತ್ಮಕ ರೀತಿಯಲ್ಲಿ ವಾಕ್ಯಗಳನ್ನು ಬರೆಯಿರಿ. ಲೇಖನದ ಮೊದಲಿಗೆ ಪ್ರಧಾನವಾದ ವಿಷಯಗಳನ್ನು ಬರೆಯಿರಿ. ಸರಳ ಭಾಷೆಯಲ್ಲಿ ವಿಷಯದ ಸತ್ವವನ್ನು ಬರೆಯಿರಿ. ಕಠಿಣ ಪದಗಳನ್ನು ಬಳಸಬೇಡಿ. ಬೇಕಾದಲ್ಲಿ ಉಪಶೀರ್ಷಿಕೆಯನ್ನು ಸೇರಿಸಿ. ಕೆಲವು ಕಡೆ ಕ್ರಮಾಂಕವನ್ನು ಬಳಸಿ ಮುಖ್ಯವಾದ ಅಂಶಗಳನ್ನು ಸೂಚಿಸಿ. ಅಗತ್ಯವಿದ್ದಲ್ಲಿ ಸಮಂಜಸವಾದ ಉದಾಹರಣೆಗಳನ್ನು ಕೊಟ್ಟು ಬರೆಯಿರಿ.

೪. ಕಡೆನುಡಿ:- ಇಲ್ಲಿ ಲೇಖನದ ಸಂಕ್ಷಿಪ್ತ ಸಾರಾಂಶವನ್ನು ವಿವರಿಸಿ ಹಾಗೆಯೆ ಲೇಖನದ ಉದ್ದೇಶವನ್ನು ಸ್ಪಷ್ಟಪಡಿಸಿ.

೫. ಉಲ್ಲೇಖ ಸೂಚಿ:- ನಾವು ಎಲ್ಲಿಂದ ಲೇಖನಕ್ಕೆ ಸಂಬಂಧಪಟ್ಟ ವಿಷಯದ ಸಂಗತಿಗಳನ್ನು ಶೇಖರಿಸಿದ್ದೇವೆ ಎಂಬುದರ ವಿವರ, ಪುಸ್ತಕದ ಹೆಸರು ಅಥವಾ ಸಂಪರ್ಕ ಕೊಂಡಿಯ ಬಗ್ಗೆ ಬರೆಯಿರಿ. ಇದನ್ನು ಓದಿದರೆ ಜನರು ನೇರವಾಗಿ ಈ ಸೂಚಿಗಳಿಂದ ವಿಚಾರಗಳನ್ನು ತಿಳಿಯಬಹುದು, ಆಗ ನಮ್ಮ ಲೇಖನದ ಮಹತ್ವ ಎಲ್ಲಿ ಕಡಿಮೆಯಾಗುತ್ತದೆಯೋ ಎಂದು ಚಿಂತಿಸಬೇಡಿ. ಧಾರಾಳವಾಗಿ ಉಲ್ಲೇಖಗಳನ್ನು ನೀಡಿ. ಇದರಿಂದ ನೀವು ಅವರಿಗೆ ನಿಮ್ಮ ಲೇಖನದಲ್ಲಿರುವ ಮಾಹಿತಿಗಿಂತ ಇನ್ನು ಹೆಚ್ಚು ಅಳವಾದ ಮಾಹಿತಿಯನ್ನು ಕೊಟ್ಟಂತೆ ಆಗುತ್ತದೆ. ಓದುಗರು ಕೂಡ ಇದನ್ನು ಪ್ರಶಂಸಿಸುತ್ತಾರೆ ಹಾಗು ನಿಮ್ಮ ಲೇಖನಗಳು ಜನಪ್ರಿಯವಾಗುತ್ತದೆ.

ಪೂರ್ತಿ ಲೇಖನವನ್ನು ಬರೆದ ನಂತರ ಅದನ್ನು ಓದಿ ನೋಡಿ, ತಪ್ಪುಗಳಿದ್ದರೆ ತಿದ್ದಿ. ತಕ್ಷಣ ಅದನ್ನು ಪ್ರರ್ದಶಿಸಬೇಡಿ. ಸ್ವಲ್ಪ ಸಮಯ ಹೋಗಲಿ. ಆನಂತರ ಪುನಃ ಲೇಖನವನ್ನು ಓದಿ ತಪ್ಪುಗಳನ್ನು ಹುಡುಕಿ. ಈ ರೀತಿ ಮಾಡಿದಾಗ ನಾವು ಅದನ್ನು ಹೊಸ ದೃಷ್ಟಿಕೋನದಿಂದ ನೋಡಿದಂತಾಗುತ್ತದೆ ಹಾಗು ಮತ್ತಷ್ಟು ದೋಷಗಳನ್ನು ಕಂಡು ಹಿಡಿಯಬಹುದು. ಕೆಲವು ಸಾಮಾನ್ಯ ದೋಷಗಳು ಹಾಗು ಪರಿಹಾರಗಳ ಮೇಲೆ ಗಮನ ಹರಿಸೋಣ.

* ಅನಗತ್ಯವಾಗಿರುವ ಪದಗಳನ್ನು ತ್ಯಜಿಸಿ. ಅವು ಓದುಗರರಿಗೆ ಬೇಸರವನ್ನುಂಟು ಮಾಡುತ್ತವೆ.
* ಪದಬರಿಗೆ (Spellings) ಹಾಗು ವ್ಯಾಕರಣದ (Grammar) ದೋಷಗಳನ್ನು ಗಮನಿಸಿ. ಇಲ್ಲದಲ್ಲಿ ನಿಮ್ಮ ಲೇಖನದ ಗುಣಮಟ್ಟ ಕಡಿಮೆ ಅನಿಸುತ್ತದೆ.
* ಇಡಿ ಲೇಖನದಲ್ಲಿ ಒಂದೇ ಕಾಲವನ್ನು ಸೂಚಿಸುವ ಕ್ರಿಯಾಪದಗಳನ್ನು ಬಳಸಿ. ಭೂತ ಕಾಲ,ವರ್ತಮಾನ ಕಾಲ ಹಾಗು ಭವಿಷ್ಯತ್ ಕಾಲದ ಕ್ರಿಯಾಪದಗಳ ಮೇಲೆ ಗಮನವಿರಲಿ.
* ಪ್ರಥಮ,ಮಧ್ಯಮ ಮತ್ತು ಉತ್ತಮ ಎಂಬ ಮೂರು ಬಗೆಯ ವ್ಯಕ್ತಿ ವಾಚಕ ಸರ್ವನಾಮಗಳ ಬಳಕೆಯಲ್ಲಿ ಕೂಡ ಏಕರೂಪತೆ ಇರಬೇಕು. ಉದಾ:- ಈ ಲೇಖನವನ್ನು ನಿಮ್ಮನ್ನು ಸೂಚಿಸಿ ಬರೆಯುತ್ತಿರುವೆ ಹಾಗಾಗಿ ಅದಕ್ಕೆ ಸಂಬಂಧ ಪಟ್ಟ ವ್ಯಕ್ತಿವಾಚಕ ಸರ್ವನಾಮಗಳನ್ನು ನಾನು ಇಲ್ಲಿ ಬಳಸಿರುವೆ.
* ಸಂದೇಹವಿಲ್ಲದ ವಿಷಯಗಳನ್ನು ಖಚಿತಪಡೆಸಿಕೊಂಡು ಬರೆಯಿರಿ. ತಪ್ಪು ಮಾಹಿತಿ ಬರೆಯುವುದರಿಂದ ಓದುಗರಿಗೆ ತಪ್ಪು ತಿಳುವಳಿಕೆ ಕೊಟ್ಟಂತೆ ಆಗುತ್ತದೆ ಮತ್ತು ಅವರಿಗೆ ತಪ್ಪು ಮಾರ್ಗ ತೋರಿಸಿದಂತಾಗುತ್ತದೆ.
* ಒಂದು ಸಲಾ ಈ ಲೇಖನವನ್ನು ನಿಮ್ಮ ಹಿತೈಷಿಯರಿಗೆ ಅಥವ ಮಿತ್ರರಿಗೆ ಓದಲು ಕೊಡಿ ಮತ್ತು ಅವರ ಅಭಿಪ್ರಾಯ ತೆಗೆದುಕೊಳ್ಳಿ. ಆವಶ್ಯಕ ಎನಿಸಿದರೆ ಬೇಕಾದಲ್ಲಿ ತಿದ್ದಿ.
* ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯ ಎಲ್ಲಾ ಸಮಾರ್ನಾಥಕ ಪದಗಳನ್ನು ಬಳಸಿ. ಏಕೆಂದರೆ ಓದುಗರು ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕುವಾಗ ನಿಮ್ಮ ಲೇಖನಕ್ಕೆ ಆಧ್ಯತೆ ಸಿಗುತ್ತದೆ.

ಹೀಗೆ ಈ ಕೆಲವು ಅಂಶಗಳನ್ನು ಸದಾ ಗಮನಿಸಿದರೆ ನೀವು ಬರೆಯುವ ಪ್ರತೀ ಲೇಖನ ಉತ್ತಮವಾಗಿರುತ್ತದೆ. ಯಾರೇ ಆಗಲಿ ಬರೆಯುತ್ತಿದ್ದರೆ ತಾನೆ ಉತ್ತಮ ಲೇಖಕರಾಗಬಹುದು.ಬೇರೆಯವರ ಲೇಖನಗಳನ್ನು ಓದುತ್ತಾ ಇರಿ. ದಿನಪತ್ರಿಕೆ, ಪುಸ್ತಕಗಳು ಮತ್ತು ಇತರ ಲೇಖನಗಳನ್ನು ಓದುತ್ತಾ ಇರಬೇಕು. ನಮ್ಮ ಙಾನ ಭಂಡಾರವನ್ನು ಉನ್ನತಗೊಳಿಸಿ. ಆನಂತರ ನಿಮ್ಮದೆ ಶೈಲಿ ನಿರ್ಮಾಣವಾಗುತ್ತದೆ.

ಫ್ರೀಲಾನ್ಸ್ ಬರಹಗಾರರಿಗೆ ಸೂಚನೆಗಳು

ಫ್ರೀಲಾನ್ಸ್ ಬರವಣಿಗೆಯಲ್ಲಿ ತೊಡಗಿಕೊಳ್ಳಬಹುದಾದವರು ಮುದ್ರಣ ಮಾಧ್ಯಮ ಮತ್ತು ಅಂತರ್ಜಾಲ ಮಾಧ್ಯಮಕ್ಕೆ ಸಂಬಂಧಿಸಿದಂತೆ ಅನೇಕ ಪ್ರಕಾರಗಳಲ್ಲಿ ಬರೆಯಬಹುದಾಗಿದೆ. ಅವುಗಳೆಂದರೆ:

* ಸುದ್ದಿ ಬರೆಯುವಿಕೆ
* ಪತ್ರಿಕಾ ಅಂಕಣಗಳು
* ವಿಶೇಷ ಲೇಖನಗಳು
* ಮ್ಯಾಗಜಿನ್‌ಗಳಿಗೆ ಬರೆಯುವಿಕೆ
* ವಾರ್ಷಿಕ ವರದಿಗಳು
* ಸಂಶೋಧನಾ ಬರವಣಿಗೆ
* ಭಾಷಣ ಬರವಣಿಗೆ
* ವೆಬ್ ಕಾಪಿ



* ಬ್ಲಾಗ್‌ಗಳು
* ಕಾರ್ಪೊರೇಟ್ ಕಾಪಿ ರೈಟಿಂಗ್
* ಅಡ್ವರ್ಟೈಸಿಂಗ್ ಕಾಪಿ ರೈಟಿಂಗ್
* ರಿಯಲ್ ಎಸ್ಟೇಟ್ ಕಾಪಿ ರೈಟಿಂಗ್
* ಗಳಿಕೆ-ರಹಿತ ಬರವಣಿಗೆ
* ಘೋಸ್ಟ್ ರೈಟಿಂಗ್
* ಪ್ರಬಂಧ ಬರವಣಿಗೆ
* ಬ್ಯುಸಿನೆಸ್ ಪ್ಲಾನ್ ಬರೆಯುವಿಕೆ
* ಪ್ರೆಸ್ ರಿಲೀಸ್ ಬರೆಯುವಿಕೆ
* ಟೆಕ್ನಿಕಲ್ ರೈಟಿಂಗ್
* ಇ-ಪುಸ್ತಕ ಬರವಣಿಗೆ
* ಪುಸ್ತಕ ಬರವಣಿಗೆ (ಇತರರಿಗಾಗಿ)
* ಲೀಗಲ್ ರೈಟಿಂಗ್
* ರೆಸ್ಯೂಮ್ ರೈಟಿಂಗ್


ಅಂತರ್ಜಾಲ ಮಾಧ್ಯಮದಲ್ಲಿ ಬರೆಯುವವರು ಈ ಮೇಲಿನ ಅನೇಕ ವಿಷಯಗಳ ಕುರಿತಂತೆ ಬರೆಯುತ್ತಾರೆ. ಯಾವುದೇ ನಿಶ್ಚಿತ ವರಮಾನದ ಕೆಲಸವಿಲ್ಲದ ಬರಹಗಾರರು ಈ ಮೇಲಿನ ಬರವಣಿಗೆಗಳಲ್ಲಿ ತೊಡಗಿ ತಮ್ಮ ಆಸಕ್ತಿಯ ಕೆಲಸವನ್ನು ಮಾಡುತ್ತಲೇ ಹಣಗಳಿಸುತ್ತಾರೆ ಕೂಡಾ. ಅಂತರ್ಜಾಲಕ್ಕಾಗಿ ಹೊಸತಾಗಿ ಬರೆಯಲು ಪ್ರಾರಂಭಿಸುವವರಿಗೆ ಕೆಲವು ಸಂಗತಿಗಳನ್ನು ನೆನಪಿಟ್ಟುಕೊಳ್ಳುವುದು ಅಗತ್ಯವಿದೆ. ಏಕೆಂದರೆ, ಅಂತರ್ಜಾಲಕ್ಕಾಗಿ ಬರೆಯುವುದೆಂದರೆ ಪತ್ರಿಕೆಗಳಿಗೆ ಬರೆದಂತೆ ಅಲ್ಲ. ಅಂತರ್ಜಾಲದ ಓದುಗರನ್ನು, ಅವರ ಸಮಯವನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕಾಗುತ್ತದೆ. ಇಲ್ಲದಿದ್ದರೆ ಎಷ್ಟೇ ಒಳ್ಳೆಯ ಬರವಣಿಗೆಯಾದರೂ ಓದುಗರನ್ನು ತಲುಪುವುದರಲ್ಲಿ ಸೋಲುತ್ತದೆ. ಅಂತರ್ಜಾಲ ಒಂದು ವಿಶ್ವ ಗ್ರಂಥಾಲಯವಾಗಿದ್ದು, ಅದರಲ್ಲಿ ನಿರಂತರವಾಗಿ ಹೊಸ ಸಂಗತಿಗಳು ಪ್ರತಿನಿತ್ಯವೂ ಬರೆಯಲ್ಪಡುತ್ತವೆ. ಯಾವುದೇ ಓದುಗ ಒಂದು ಚಿಕ್ಕ ವಿಷಯಕ್ಕಾಗಿ ಹುಡುಕಿದರೂ ಆತನಿಗೆ ಸಾವಿರಾರು ಪುಟಗಳಷ್ಟು ಮಾಹಿತಿಗಳು ಲಭ್ಯವಾಗುತ್ತವೆ. ಆ ಮಾಹಿತಿಗಳಲ್ಲಿ ಆತನಿಗೆ ಬೇಕಾದದ್ದನ್ನು ಆರಿಸಿಕೊಳ್ಳುವುದೇ ಒಂದು ದೊಡ್ಡ ಪ್ರಯಾಸವಾಗುತ್ತದೆ. ಹಾಗಿರುವಾಗ ಆತ ಯಾವುದಾದರೂ ಲೇಖನವನ್ನು ಪೂರ್ಣವಾಗಿ ಓದುತ್ತಾನಾದರೂ ಹೇಗೆ?

ಹಾಗಾಗಿ ಅಂತರ್ಜಾಲಕ್ಕಾಗಿ ಏನನ್ನಾದರೂ ಬರೆಯುವುದಾದರೆ ಅದಕ್ಕೆ ಕೆಲವು ಸೂಚನೆಗಳಿವೆ. ಅವುಗಳನ್ನು ಪಾಲಿಸಬೇಕಾಗುತ್ತದೆ. ಮೊದಲನೆಯದಾಗಿ, ಒಂದು ಲೇಖನ ಅದರ ವಿಷಯವನ್ನು ಹುಡುಕಿದ ಓದುಗನಿಗೆ ತಕ್ಷಣ ಸಿಗಬೇಕು. ಅಂತರ್ಜಾಲದಲ್ಲಿ ಆತ ಹುಡುಕಿದ ವಿಷಯಕ್ಕೆ ಸಂಬಂಧಿಸಿ ಸಾವಿರ ಪುಟಗಳು ತೆರೆದುಕೊಂಡರೂ, ಆತನಿಗೆ ಮೊದಲು ಕಾಣಿಸುವುದು ಮೊದಲ ಹತ್ತು ಪುಟಗಳಿಗೆ ಲಿಂಕ್‌ಗಳು ಮಾತ್ರ. ಅವೂ ಸಹಾ ಆತನ ಹುಡುಕಾಟಕ್ಕೆ ಅತ್ಯಂತ ಹೆಚ್ಚು ಪ್ರಸ್ತುತವಾದ ವಿಷಯವನ್ನು ಒಳಗೊಂಡಿರುವಂತಹವು. ಆತ ನಂತರದ ಹತ್ತು ಪುಟಗಳನ್ನು ಅಥವಾ ನಂತರದ ಯಾವುದೇ ಹುಡುಕುವ ಸಂಭವವೇ ಕಡಿಮೆ. ಹಾಗಾಗಿ, ಆತನಿಗೆ ಆ ಮೊದಲ ಹತ್ತು ಪುಟಗಳೊಳಗೇ ನಾವು ಬರೆದ ಲೇಖನ ಸಿಗುವಂತೆ ಮಾಡಬೇಕು. ಅಂದರೆ, ಅಷ್ಟು ಪ್ರಸ್ತುತವಾಗುವಂತೆಯೇ ಅದನ್ನು ಬರೆಯಬೇಕು. ಹಾಗೆ ಬರೆಯುವುದನ್ನು Search Engin Optimization (SEO) ಎಂದು ಕರೆಯುತ್ತಾರೆ.

ಅಂತರ್ಜಾಲದ ಮಾರುಕಟ್ಟೆಗೆ ನಿರೂಪಣೆಯ ವಿಷಯವೇ ಎಲ್ಲವೂ ("ಕಂಟೆಂಟ್ ಈಸ್ ದ ಕಿಂಗ್") ಆಗಿರುತ್ತದೆ. ಹಾಗಾಗಿ ಅಂತರ್ಜಾಲಕ್ಕಾಗಿ ಬರೆಯುವುದನ್ನು ವಿಶೇಷವಾಗಿ ರೂಪಿಸಲಾಗಿದ್ದು, ಅನೇಕ ತಜ್ಞರು ಈ ಕುರಿತಂತೆ ಸೂಚನೆಗಳನ್ನು ನೀಡಿದ್ದಾರೆ. ಇದು ಪತ್ರಕರ್ತನ ಬರವಣಿಗೆ ಅಥವಾ ಸಾಮಾನ್ಯ ಲೇಖಕನ ಬರವಣಿಗೆಗಿಂತಲೂ ವಿಭಿನ್ನವಾಗಿರುತ್ತದೆ. ಆ ಸೂಚನೆಗಳನ್ನರಿತ ಬರಹಗಾರನ ಬರಹಗಳು ಸರ್ಜ್ ಎಂಜಿನ್‌ ಹುಡುಕಿ ತರುವ ಪುಟಗಳಲ್ಲಿ ಅತ್ಯಂತ ಮೇಲಕ್ಕೆ ಬರುತ್ತವೆ, ಮತ್ತು ಹುಡುಕುವವನಿಗೆ ಅತ್ಯಂತ ಬೇಗ ಸಿಗುತ್ತವೆ. ಹಾಗೆ ಬರೆಯಬೇಕಾದವರು ಈ ಕೆಳಗಿನ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿರುತ್ತದೆ:

* ಮೊದಲನೆಯದಾಗಿ ಒಬ್ಬ ಬರಹಗಾರ ತಾನು ಬರೆಯಬಹುದಾದ ವಿಷಯದ ಕುರಿತು ಸ್ಪಷ್ಟತೆಯನ್ನು ಹೊಂದಿರಬೇಕು. ಅಂದರೆ, ಆತ ಯಾವುದಾದರೂ ನಿರ್ದಿಷ್ಟ ವಿಷಯದ ಕುರಿತು ಮಾತ್ರ ಬರೆಯಲು ಪ್ರಾರಂಭಿಸಬೇಕು. ಉದಾಹರಣೆಗೆ ಕಂಪ್ಯೂಟರ್‌ಗಳ ಕುರಿತು, ವ್ಯವಹಾರದ ಕುರಿತು, ಶಿಕ್ಷಣದ ಕುರಿತು, ಫ್ಯಾಶನ್ ಕುರಿತು, ಹೀಗೆ ಯಾವುದಾದರೂ ಒಂದು ಕಾರ್ಯಕ್ಷೇತ್ರವನ್ನು ಆತ ಆರಿಸಿಕೊಳ್ಳಬೇಕು. ಬರೆಯುತ್ತ ಬರೆಯುತ್ತ ಆತ ಅದರಲ್ಲಿ ಪರಿಣತನಾಗುತ್ತ ಹೋಗುತ್ತಾನೆ. ಹಾಗೆ ಆದರೆ ಮಾತ್ರ ಆ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಕೆಲಸ, ಬೆಲೆ ಆತನಿಗೆ ಸಿಗಲು ಸಾಧ್ಯ. ಸಾಧಾರಣವಾಗಿ ಯಾವ ವಿಷಯದ ಮೇಲೂ ಬರೆಯುವವನು, ಯಾವ ವಿಷಯವನ್ನೂ ಆಳದಲ್ಲಿ ಅರಿಯಲು ಸಾಧ್ಯವಿಲ್ಲ. ತನ್ನ ಕಾರ್ಯಕ್ಷೇತ್ರವನ್ನು ಬೇಗ ಆರಿಸಿಕೊಂಡವನು ಬೇಗ ಬರಹಗಾರನಾಗಿ ಮೇಲೆ ಬರುತ್ತಾನೆ.
* ಅಂತರ್ಜಾಲಕ್ಕಾಗಿ ಬರೆಯಬೇಕಾದ ಲೇಖನಗಳು ಅತ್ಯಂತ ಸರಳವಾದ ಭಾಷೆಯಲ್ಲಿ, ಅತ್ಯಂತ ಸುಲಭದ ವಾಕ್ಯಗಳಲ್ಲಿ ಬರೆಯಲ್ಪಟ್ಟಿರಬೇಕು. ಅತ್ಯಂತ ಸಾಧಾರಣ ಓದುಗನಿಗೂ ಅದು ಅರ್ಥವಾಗುವಂತಿರಬೇಕು.
* ನಮ್ಮ ಶಬ್ದಜ್ಞಾನವನ್ನೆಲ್ಲ ಈ ಲೇಖನಗಳಲ್ಲಿ ಉಪಯೋಗಿಸಿಕೊಳ್ಳುವ ಅಗತ್ಯವಿಲ್ಲ. ಯಾವುದು ಸಮಂಜಸವೋ ಅಂತಹ ಶಬ್ದಗಳನ್ನು ಬಳಸಿದರೆ ಸಾಕು.
* ದೈನಿಕ ಸಂಭಾಷಣೆಯ ರೀತಿಯಲ್ಲಿ ಬರವಣಿಗೆ ಇದ್ದಷ್ಟೂ ಲೇಖನವನ್ನು ಓದುಗ ಓದುವ ಸಾಧ್ಯತೆ ಹೆಚ್ಚು.
* ಅತ್ಯಂತ ಕಡಿಮೆ ಶಬ್ದಗಳಲ್ಲಿ ಪೂರ್ಣ ಮಾಹಿತಿಯನ್ನು ನೀಡಿರಬೇಕು.
* ವಾಕ್ಯಗಳು, ಮತ್ತು ಪ್ಯಾರಾಗಳು ಚಿಕ್ಕದಾಗಿದ್ದು, ಪ್ರತೀ ಪ್ಯಾರಾ ಒಂದೊಂದು ಸಂಗತಿಯನ್ನು ಸ್ಪಷ್ಟವಾಗಿ ವಿವರಿಸಿರಬೇಕು.
* ಉಪಶೀರ್ಷಿಕೆಗಳು ಇದ್ದಷ್ಟೂ ಒಂದು ಲೇಖನ ಹೆಚ್ಚು ಓದಿಸಿಕೊಳ್ಳುತ್ತದೆ. ಹೆಚ್ಚು ಉಪಶೀರ್ಷಿಕೆಗಳನ್ನು ವಿಷಯಕ್ಕೆ ತಕ್ಕಂತೆ ನೀಡುವುದು ಅಗತ್ಯ.
* ಒಂದೇ ಒಂದು ಲೇಖನವೂ ಇಡೀ ವೆಬ್‌ಸೈಟ್‌ಗೆ ಬರುವ ಜನಸಂದಣಿಯ ಮೇಲೆ ಪ್ರಭಾವ ಭೀರುವ ಶಕ್ತಿಯನ್ನು ಹೊಂದಿರುತ್ತದೆ. ಒಂದೇ ಒಂದು ಲೇಖನವೂ ಒಂದು ವೆಬ್‌ಸೈಟ್‌ ಕುರಿತು ಅಭಿಪ್ರಾಯ ಮೂಡಿಸುತ್ತದೆ. ಉತ್ತಮ ಲೇಖನವಾದರೆ, ಸುಮ್ಮನೇ ಸರ್ಜ್ ಎಂಜಿನ್ ಹುಡುಕುವ ಬದಲು ನೇರವಾಗಿ ಆ ವೆಬ್‌ಸೈಟ್‌ನಲ್ಲಿಯೇ ಓದುಗ ಹುಡುಕುತ್ತಾನೆ. ಹಾಗಾಗಿ ಪ್ರತೀ ಲೇಖನವೂ ಮುಖ್ಯವೇ ಆಗುತ್ತದೆ.
* ಕೀ ವರ್ಡ್ (Key word): ಇದು ಅತ್ಯಂತ ಮುಖ್ಯವಾಗಿ ಒಬ್ಬ ಲೇಖಕ ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿ. ಅಂತರ್ಜಾಲದಲ್ಲಿ ಏನನ್ನು ಹುಡುಕಿದರೂ ಅದು ಒಂದು ಶಬ್ದ ಅಥವಾ ಕೆಲವು ಶಬ್ದಗಳ ಒಂದು ಗುಂಪನ್ನು ನಮೂದಿಸಿ ಹುಡುಕುತ್ತೇವಲ್ಲ, ಆ ಹುಡುಕಾಟದ ಶಬ್ದಗಳು ಸಾಮಾನ್ಯವಾಗಿ ವಿಶ್ವದ ಎಲ್ಲೆಡೆಯಿಂದ ಹುಡುಕಿದರೂ ಒಂದೇ ರೀತಿ ಇರುತ್ತವೆ. ಉದಾಹರಣೆಗೆ online content writing job ಕುರಿತು ಹುಡುಕಬೇಕಾದರೆ, online content writing job, online content writing works, internet writing jobs, write for internt, writing for websites ಹೀಗೆ ಅನೇಕ ಶಬ್ದಗಳನ್ನು ಕೊಟ್ಟು ಹುಡುಕುತ್ತೇವೆ. ಇಂತಹ ಸಂಗತಿಯನ್ನು ಅರ್ಥ ಮಾಡಿಕೊಂಡ ಒಬ್ಬ ಬರಹಗಾರ, ಈ ತರಹದ ಎಲ್ಲ ಕೀ ವರ್ಡ್‌ಗಳ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನೆಲ್ಲ ತನ್ನ ಲೇಖನದಲ್ಲಿ ಅಳವಡಿಸಿಕೊಳ್ಳುತ್ತ ಬರೆಯುತ್ತ ಹೋಗುತ್ತಾನೆ. ಹಾಗಿದ್ದಾಗ ಮಾತ್ರ ಅದು ಸರ್ಚ್ ಎಂಜಿನ್‌ಗಳು ಹುಡುಕಿದ ಪುಟಗಳಲ್ಲಿ ಅತ್ಯಂತ ಮೇಲೆ ಕಾಣಿಸಿಕೊಳ್ಳುತ್ತದೆ.
* ಲೇಖನಗಳನ್ನು ಕನಿಷ್ಟ ಶಬ್ದಗಳಲ್ಲಿ ಬರೆಯುವುದೇ ಅತ್ಯಂತ ಪ್ರಮುಖವಾದ ಹಂತವಾಗಿದೆ. ಯಾವುದು ಮಾಹಿತಿಯಲ್ಲವೋ ಅಂತಹ ಸಾಲು ಅಗತ್ಯವೇ ಇಲ್ಲ.


ಈ ಕೆಲವು ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಒಬ್ಬ ಉತ್ತಮ ಬರಹಗಾರನಾಗಲು ಸಿದ್ಧತೆ ನಡೆಸುವುದು ಸುಲಭವಾಗುತ್ತದೆ.

ಮನೆಯಿಂದ ಬರೆಯಿರಿ..


ಮನೆಯಿಂದ ಬರೆಯಿರಿ: ನಿವೃತ್ತರಾದವರಿಗೆ, ಗೃಹಿಣಿಯರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮನೆಯಿಂದಲೇ ಬರವಣಿಗೆ ಕೆಲಸ ಮಾಡಿ ಹಣ ಗಳಿಸುವುದಕ್ಕೆ ಅನೇಕ ಅವಕಾಶಗಳಿವೆ. ಬರೆಯುವವರಿಗೆ ಅಂತರ್ಜಾಲದಲ್ಲಿ ಅನೇಕ ಅವಕಾಶಗಳಿವೆ, ಹಾಗೆ ಕೆಲಸ ಮಾಡುವವರು ತಿಂಗಳಿಗೆ ಸುಮಾರು ಮೂವತ್ತು-ನಲವತ್ತು ಸಾವಿರದಷ್ಟು ಗಳಿಸುತ್ತಿದ್ದಾರೆ ಅನ್ನುವುದನ್ನು ಮೊದಲಬಾರಿಗೆ ಅಂತರ್ಜಾಲದಲ್ಲಿ ನೋಡಿದಾಗ ಬಹಳ ಆನಂದವಾಗಿತ್ತು. ಆ ಕುರಿತು ಸ್ವಲ್ಪ ರಿಸರ್ಚ್ ಮಾಡಿ ನೋಡಿದಾಗ ಹೇಗೆ ಬರೆಯುವವರು ಹಣಗಳಿಸುತ್ತಿದ್ದಾರೆ, ಈ ವೃತ್ತಿಯ ವ್ಯಾಪ್ತಿ ಎಷ್ಟು ಎಂದೆಲ್ಲ ನೋಡಿ ಅಚ್ಚರಿಯಾಗಿತ್ತು. ಹಾಗೆಯೇ ಇಲ್ಲಿ ಮೋಸ ಹೋಗುವ ಸಂದರ್ಭಗಳೂ ಬಹಳೇ ಇವೆ ಅನ್ನುವುದೂ ಅರ್ಥವಾಯಿತು. ಆದರೆ, ನಿಜವಾಗಿಯೂ ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡವರಿಗೆ ಇಲ್ಲಿ ವಿಫುಲ ಅವಕಾಶಗಳಿವೆ ಅನ್ನುವುದಂತೂ ನಿಜ.

ನಾನು ಶಿವಮೊಗ್ಗದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಸಂಜೆ ಆರುಗಂಟೆಯಿಂದ ರಾತ್ರಿ ಎರಡು ಗಂಟೆಯವರೆಗೆ ನನ್ನ ಶಿಫ್ಟ್ ಇತ್ತು. ಹಾಗಾಗಿ ಇಡೀ ದಿನ ಸಮಯವಿರುತ್ತಿತ್ತು. ಏನನ್ನಾದರೂ ಮಾಡಬೇಕು ಎಂದು ಯೋಚಿಸಿದ ನಾನು, ಮನೆಯಿಂದಲೇ ಬರೆಯುವ ಕೆಲಸವೇನಾದರೂ ಸಿಗಬಹುದೇನೋ ಅಂದುಕೊಂಡು ಹುಡುಕುತ್ತಿದ್ದೆ. ಗೆಳೆಯನೊಬ್ಬನ ಮೂಲಕ ಕಂಟೆಂಟ್ ರೈಟಿಂಗ್ ಕೆಲಸ ಕೊಡುವ ಒಬ್ಬನ ಪರಿಚಯವಾಯಿತು. ದಿನಕ್ಕೆ ನಾಲ್ಕು-ಐದು ಲೇಖನಗಳನ್ನು ಬರೆಯಬೇಕು. ಒಂದು ಲೇಖನ ಐದು ನೂರು ಶಬ್ದಕ್ಕಿಂತ ದೊಡ್ಡದಾಗಿರಬೇಕು. ಸಾವಿರ ಶಬ್ದಗಳ ಲೇಖನವಾದರೆ ದಿನಕ್ಕೆ ಮೂರು. ಇದಕ್ಕೆ ಸಿಗುತ್ತಿದ್ದ ಸಂಭಾವನೆಯೇನೂ ದೊಡ್ಡದಲ್ಲ. ಸಾವಿರ ಶಬ್ದಗಳ ಲೇಖನಕ್ಕೆ ನೂರು ರೂಪಾಯಿ ಮತ್ತು ಐನೂರು ರೂಪಾಯಿಗಳ ಲೇಖನಕ್ಕೆ ಐವತ್ತು. ಆದರೆ, ಪ್ರತಿದಿನ ಕೆಲಸವಿರುವ, ನಿರ್ದಿಷ್ಟವಾದ ಆದಾಯವಿರುವ ಈ ಕೆಲಸ ಒಳ್ಳೆಯದೇ ಆಯಿತು. ನಂತರದಲ್ಲಿ ಕೆಲವು ವಿದೇಶಿಯರು ನಡೆಸುತ್ತಿದ್ದ, ಚರ್ಚಿಸುತ್ತಿದ್ದ ಫೋರಂಗಳಲ್ಲಿ ಓದಿ ಧಂಗಾಗಿಹೋದೆ. ನನಗಿಂತ ಹತ್ತು-ಹದಿನೈದರಷ್ಟು ಅವರು ಪ್ರತೀ ಲೇಖನಕ್ಕೆ ಗಳಿಸುತ್ತಿದ್ದರು. ಮತ್ತು, ಫ್ರೀಲ್ಯಾನ್ಸ್ ಕಂಟೆಂಟ್ ರೈಟಿಂಗ್‌ನ ವ್ಯಾಪ್ತಿ, ವಿಸ್ತಾರವನ್ನು ಮತ್ತು ಅದನ್ನು ಕೆಲವರು ಸಮರ್ಥವಾಗಿ ಬಳಸಿಕೊಳ್ಳುವ ರೀತಿಯನ್ನು ಆಗ ಅರ್ಥಮಾಡಿಕೊಳ್ಳುತ್ತ ಹೋದೆ. ಹಾಗೆಂದು ನಾನು ಕೇವಲ ಒಂದು ವರ್ಷ ಮಾತ್ರ ಒಂದಷ್ಟು ಬರೆದೆ. ನಂತರದಲ್ಲಿ ಅದನ್ನು ಬಿಟ್ಟುಬಿಟ್ಟಿದ್ದೆ. ಈಗ ಮತ್ತೆ ಆ ಕಡೆಗೆ ಗಮನ ಹರಿಸುತ್ತಿದ್ದೇನೆ. ಏಕೆಂದರೆ ಅನೇಕರಿಗೆ ಇದರಿಂದ ಸಹಾಯವಾಗುತ್ತದೆ. ಇನ್ನು ಮುಂದೆ ಈ ಕುರಿತು ಒಂದಷ್ಟು ಮಾಹಿತಿಯನ್ನು ನೀಡುವ ಪ್ರಯತ್ನವನ್ನು ನಾನು ಮಾಡುತ್ತೇನೆ.

ನಮಗೂ ಬೇಕು ಬರೆಯುವವರು: ಹಾಗೆ ನೋಡಿದರೆ ಮಾತ್ರ ಕನ್ನಡದಲ್ಲಿ ಬರೆಯುವವರಿಗೆ ಇಲ್ಲಿ ಅವಕಾಶಗಳು ಇನ್ನೂ ಇಲ್ಲ. ಕನ್ನಡದಲ್ಲಿ ಇರುವ ಕೆಲವೇ ವೆಬ್‌ಸೈಟ್‌ಗಳಲ್ಲಿ ಬರಹಗಾರರಿಗೆ ಸಂಭಾವನೆ ಕೊಡುವ ಏಕೈಕ್ ವೆಬ್‌ಸೈಟ್ ಅಂದರೆ ಕೆಂಡಸಂಪಿಗೆ. ಆದರೆ, ಕೆಂಡಸಂಪಿಗೆ ಒಂದು ಸಾಹಿತ್ಯಿಕ, ಸಾಂಸ್ಕೃತಿಕ ವೇದಿಕೆಯಾಗಿರುವುದರಿಂದಾಗಿ, ವ್ಯಾಪಾರ-ವ್ಯವಹಾರಗಳ ಕುರಿತು ಬರೆಸುವ ಮತ್ತು ಅದಕ್ಕೆ ಹಣಕೊಡುವ ಬೇರೆ ಯಾವುದೇ ಕನ್ನಡ ವೆಬ್‌ಸೈಟ್‌ಗಳಿಲ್ಲ. ಹಾಗಾಗಿ ಫ್ರೀಲಾನ್ಸ್ ಬರವಣಿಗೆ ಮಾಡಬೇಕೆನ್ನುವವರು ಆಂಗ್ಲ ಭಾಷೆಯಲ್ಲಿ ಬರೆಯುವುದಕ್ಕೇ ಮೊರೆ ಹೋಗ ಬೇಕು.

ಆದರೆ, ನಾವು ಅದನ್ನು ಪ್ರಾರಂಭಿಸಲಿದ್ದೇವೆ! ಹಿಂದೆ ಹೇಳಿದಂತೆ ನಾವು ಟಿವಿಕರ್ನಾಟಕ.ಕಾಮ್ ಪ್ರಾರಂಭಿಸುತ್ತಿದ್ದೇವಲ್ಲ, ಅದಕ್ಕೆ ಬರಹಗಾರರನ್ನು ಸಿದ್ಧಗೊಳಿಸುತ್ತಿದ್ದೇವೆ. ಕನ್ನಡದ ಟಿವಿ ಚಾನೆಲ್‌ಗಳ ಕಾರ್ಯಕ್ರಮಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ಅವುಗಳ ಕುರಿತು ವಿಮರ್ಶೆಯನ್ನು ಬರೆಯುವವರು ನಮಗೆ ಬೇಕು. ನೇರವಾಗಿ ಈ ಧಾರಾವಾಹಿ ಎಳೆತ, ಕೊರೆತ ಅಂತ ಹೇಳುವುದು ಸುಲಭ. ಆದರೆ, ಅದರ ಮೇಕಿಂಗ್, ಮತ್ತು ಕನ್ನಡದ ಮಾರುಕಟ್ಟೆ ಮಿತಿ ಎಲ್ಲವನ್ನೂ ಅರಿತು, ಕಾರ್ಯಕ್ರಮಗಳ ಮೌಲ್ಯಮಾಪನ ಮಾಡುವುದು, ಆಸಕ್ತ ವಿಕ್ಷಕರಾಗಿ ಸಲಹೆ ಸೂಚನೆಗಳನ್ನು ಒಳಗೊಂಡಂತೆ ಬರವಣಿಗೆ ಮಾಡುವವರು ನಮಗೆ ಬೇಕು. ಇನ್ನು ಮುಂದೆ ಕನ್ನಡದ ಅನೇಕ ವೆಬ್‌ಸೈಟ್‌ಗಳು, ಹೊಸ ವ್ಯವಹಾರ ಪ್ರಾರಂಭಿಸುವವರು ಇದನ್ನು ಅನುಸರಿಸಬಹುದು ಮತ್ತು ಕನ್ನಡದಲ್ಲಿಯೂ ಕಂಟೆಂಟ್ ರೈಟಿಂಗ್‌ ಹೆಚ್ಚು ಹೆಚ್ಚು ಆಗಬಹುದು ಅನ್ನುವ ನಿರೀಕ್ಷೆಯಿದೆ.
ಈಗಾಗಲೇ ಬರವಣಿಗೆಯಲ್ಲಿ ಆಸಕ್ತಿಯಿರುವ ನಾಲ್ಕು-ಐದು ಜನ ನಮ್ಮ ಹೊಸ ಸೈಟ್‌ಗೆ ಬರೆದುಕೊಡಲು ಒಪ್ಪಿದ್ದಾರೆ. ಅದರಲ್ಲಿ ಮಲೆನಾಡಿನ ಹಳ್ಳಿಯಲ್ಲಿರುವ ಓರ್ವ ಮತ್ತು ಬೆಂಗಳೂರಿನಲ್ಲಿಯೇ ಇರುವ ಇಬ್ಬರು ಗೃಹಿಣಿಯರು ಸೇರಿದ್ದಾರೆ. ಇವರೆಲ್ಲ, ಕನ್ನಡ ವಾಹಿನಿಗಳನ್ನು ಹೊಸ ದೃಷ್ಟಿಕೋನದಿಂದ ನೋಡುತ್ತ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ.

ಕನ್ನಡ ವಾಹಿನಿಗಳ ಕಾರ್ಯಕ್ರಮಗಳಿಗೆ ಒಂದಿಷ್ಟು ಜನ ಒಳ್ಳೆಯ ವಿಮರ್ಶಕರನ್ನು ಸಿದ್ಧಗೊಳಿಸುವ ಕೆಲಸವನ್ನು ನಾವು ದಿಗಂತ ಮೀಡಿಯಾ ಸೊಲ್ಯುಶನ್‌ನವರು ಮಾಡಲು ಪ್ರಯತ್ನಿಸುತ್ತಿದ್ದೇವೆ. ನೀವು ಪತ್ರಿಕೆಗಳಲ್ಲಿ ಕೆಲವೊಮ್ಮೆ ಬರುವ ಚಲನಚಿತ್ರ ವಿಮರ್ಶೆಗಳನ್ನು ನೋಡುತ್ತಿರಬಹುದು. ಕೆಲವೊಮ್ಮೆಯಂತೂ ಅವು ಗಾಸಿಪ್ ಕಾಲಂಗಳಿಗೆ ಹೋಲಿಸುವಷ್ಟು ಕೆಟ್ಟದಾಗಿ ಬರೆಯಲ್ಪಟ್ಟಿರುತ್ತವೆ. ಬರೆದವರು ತಮ್ಮದೇ ಶಬ್ದಗಳ ಜಾಲದಲ್ಲಿ ಕಳೆದುಹೋದಂತೆ ಕಾಣುತ್ತದೆ ಹೊರತೂ, ಓದುವವನಿಗೆ ಸಾಕಷ್ಟು ಹಣ ಖರ್ಚು ಮಾಡಿ ಮಾಡಿದ ಒಂದು ಸಿನೆಮಾದ ವಿಮರ್ಶೆಯಂತೆ ಕಾಣುವುದೇ ಇಲ್ಲ. ಜೊತೆಗೆ, ಓದುವವರಿಗೆ, ಯುವ ಬರಹಗಾರರಿಗೆ ಸಿನೆಮಾ ವಿಮರ್ಶೆಯೆಂದರೆ ಹೀಗೇ ಇರಬೇಕು ಅನ್ನಿಸಿಬಿಡುತ್ತದೆ. ಚಿತ್ರಗಳ, ಟಿವಿ ವಾಹಿನಿಗಳ ಕಾರ್ಯಕ್ರಮಗಳನ್ನು ಹೇಗೆ ವಿಮರ್ಶಿಸಬೇಕು ಅನ್ನುವುದನ್ನು ಈಗ ನಾನೂ ಕಲಿಯುತ್ತಿದ್ದೇನೆ. ಈ ಕುರಿತಂತೆ ಮುಂದೆ ಬರೆಯಲಿದ್ದೇನೆ.

Badge

Loading…
 

© 2009   Created by EKAVI ಈಕವಿ TUMKUR on Ning.   Create Your Own Social Network

Badges  |  Report an Issue  |  Privacy  |  Terms of Service